‘ಸಲಗ’ ಚಿತ್ರತಂಡದಿಂದ ಆಹಾರ ಕಿಟ್ ವಿತರಣೆ

ಕೊರೊನಾ ಲಾಕ್‍ಡೌನ್ ಆಗಿದ್ದು, ಮಾರ್ಚ್ ತಿಂಗಳಿಂದ ಎಲ್ಲಾ ವಹಿವಾಟುಗಳು ಸ್ತಬ್ದವಾಗಿದೆ. ಅಲ್ಲದೆ ಚಿತ್ರಮಂದಿರಗಳು ಮುಚ್ಚಿವೆ. ಇದರಿಂದ ಅಲ್ಲಿನ ಸಿಬ್ಬಂದಿಗಳು ಕಷ್ಟವನ್ನು ಅನುಭವಿಸುತ್ತಿದ್ದಾರೆ.

ಇದನ್ನು ಅರಿತ ‘ಸಲಗ’ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಚಿತ್ರಮಂದಿರಗಳ ನೌಕರರಿಗೆ ಆಹಾರ ಕಿಟ್ ನೀಡಲು ನಿರ್ಣಯ ತೆಗೆದುಕೊಂಡಿದ್ದರು.ಅದರಂತೆ ಮಂಗಳವಾರ ಬೆಳಿಗ್ಗೆ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ನಟ ದುನಿಯಾವಿಜಯ್ ಮತ್ತು ಧನಂಜಯ್ ಜಂಟಿಯಾಗಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಬೆಂಗಳೂರಿನ ಸಂತೋಷ್, ನರ್ತಕಿ, ಗೋರ್ವಧನ್, ಪ್ರಸನ್ನ ಸೇರಿದಂತೆ ಸುಮಾರು 260 ನೌಕರರಿಗೆ ಕಿಟ್ ವಿತರಣೆ ಮಾಡಲಾಗಿದೆ.ಆದಷ್ಟು ಬೇಗನೆ ಚಿತ್ರಮಂದಿರಗಳು ತೆರೆಯ ಬೇಕೆಂಬುದು ಚಿತ್ರೋದ್ಯಮದ ಆಶಯವಾಗಿದೆ ಎಂದರು. ನಿರ್ದೇಶಕ ನಾಗಶೇಖರ್, ನಿರ್ಮಾಪಕರುಗಳು ಪುಣ್ಯದ ಕೆಲಸದಲ್ಲಿ ಹಾಜರಿದ್ದರು.

This Article Has 1 Comment
  1. Pingback: CI CD Service Provider

Leave a Reply

Your email address will not be published. Required fields are marked *

Translate »
error: Content is protected !!