ಚೈತನ್ಯ ಫೌಂಡೇಶನ್ ಕರ್ನಾಟಕ, ಕನಕಪೀಠ ವಿಶ್ವವಿದ್ಯಾಲಯ ಧಾರವಾಡ ಇವುಗಳ ವತಿಯಿಂದ ನಡೆದ ಧಾರವಾಡ ನುಡಿ ಸಡಗರ ಚಲನಚಿತ್ರೋತ್ಸವ ಪ್ರಶಸ್ತಿ -2023ಕ್ಕೆ ರಾವುತ ಚಿತ್ರ ಭಾಜನವಾಗಿದೆ.
ಚಿತ್ರ ನಿರ್ದೇಶಕ ಸಿದ್ದು ವಜ್ರಪ್ಪರಿಗೆ ಉತ್ತಮ ಕಥೆ ಬರಹಗಾರ ಮತ್ತು ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಹಿರಿಯ ನಟ ಡಾ. ಚಿಕ್ಕಹೆಜ್ಜಾಜಿ ಮಹದೇವ್ ನೀಡಿ ಗೌರವಿಸಿದರು.
ರಾವುತ ಚಿತ್ರಕಥೆಗೆ ದೊರಕಿದ ಈ ಪ್ರಶಸ್ತಿಯು ಏಳು ಜನ ಪರಿಶೀಲಕರಿಂದ ದೊರಕಿದೆ. ತಮ್ಮಣ್ಣ ಬಡಿಗೇರ್, ಚಂದ್ರಶೇಖರ ಹನುಮಗೌಡ( ಕನಕ ಪೀಠ) ಮುಂತಾದವರು ಪ್ರಶಸ್ತಿ ಪರಿಶೀಲನಾ ಸಮಿತಿಯಲ್ಲಿ ಇದ್ದರು.
ಚಿತ್ರದ ಕತೆಯು ಗುರುಶಿಸ್ಯರ ಸಂಗಮದಲ್ಲಿ, ಮರಣದ ನಂತರದ ಆದಿಯನ್ನು ತೋರುವ ಕಥೆ ಇದೆ. ಅಲ್ಲದೇ ಎರಡು ಉಪಕಥೆಗಳು ಈ ಸಿನಿಮಾದಲ್ಲಿ ಇವೆ. ಆ ಕತೆಗಳು ಆಯೋಜಕರಿಗೆ ತುಂಬಾ ಹಿಡಿಸಿವೆ. ಜೀವನದ ಮೂಲ ಅಂಶಗಳನ್ನು ಪ್ರತಿ ದೃಶ್ಯದಲ್ಲೂ ತೋರಿಸಿದ್ದು ಪರಿಶೀಲಕರಿಗೆ ಖುಷಿ ತಂದಿದೆ. ಕಥೆಯ ಬಿಗಿಯಾಗಿರುವದೇ ಈ ಚಿತ್ರಕ್ಕೆ ಜೀವ ಎಂದು ನಿರ್ದೇಶಕರನ್ನು ಪರಿಶೀಲನಾ ಸಮಿತಿ ಬೆನ್ನು ತಟ್ಟಿದೆ.
“ಶ್ರೀ ವಿಶ್ವಕರ್ಮ ಸಿನಿಮಾಸ್” ಅಡಿಯಲ್ಲಿ ಈರಣ್ಣ ಸುಭಾಸ್ ಬಡಿಗೇರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ನಾಯಕ ರಾಜಪ್ರವೀಣ್, ನಾಯಕಿ ಭವಾನಿ ಇನ್ನೂಳಿದ ಕಲಾವಿದರು, ಹರ್ಷ ವರ್ಧನ್,ರಾಘವ್ ಗೌಡಪ್ಪ, ಮಾರೇಶ್ ಕನಕಗಿರಿ, ನರಸಿಂಹಮೂರ್ತಿ, ಇವರ ನಟನೆ ಚೆನ್ನಾಗಿ ಮೂಡಿ ಬಂದಿದೆ. ಸಂಗೀತ ಸುಚಿನ್ ಶರ್ಮ, ಸಂಕಲನ, ಅರವಿಂದ್, ಕಲೆ ಲಷ್ಮಿಕಾಂತಜೋಶಿ ಅವರದ್ದು ಆಗಿದೆ.
ಚಿತ್ರದ ಹಾಡುಗಳು ಪೂರ್ಣವಾಗಿದ್ದು, ಪ್ರಖ್ಯಾತ ಆಡಿಯೋ ಕಂಪನಿಯಲ್ಲಿ ಬಿಡುಗಡೆಗೊಳ್ಳಲ್ಲಿವೆ. ಚಿತ್ರವು ಅತಿ ಶೀಘ್ರದಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರ ನಿರ್ದೇಶಕ ಸಿದ್ದುವಜ್ರಪ್ಪ ತಿಳಿಸಿದ್ದಾರೆ.
ಇದೇ ವೇಳೆ ರಾವುತ ಚಿತ್ರದ ಫಸ್ಟ್ ಲುಕ್ ನ್ನು ಸಂತೋಷ್ ಆನಂದ ರಾಮ್ ಮತ್ತು ನಾಯಕ ನಟ ಯುವ ರಾಜ್ ಕುಮಾರ್ ಹಾಗೂ ಯುವ ಚಿತ್ರ ತಂಡ ಬಿಡುಗಡೆ ಮಾಡಿತು.
—-

Be the first to comment