ಮಗನ ಚೊಚ್ಚಲ ಚಿತ್ರಕ್ಕೆ ರವಿಶಂಕರ್ ನಿರ್ದೇಶನ!

ಆರ್ಮುಗ ರವಿಶಂಕರ್ ಅವರು ತಮ್ಮ ಮಗ ಅಧ್ವಯ್ ಶಂಕರ್‌ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. 20 ವರ್ಷಗಳ ಬಳಿಕ ಮತ್ತೆ ಮಗನ ಸಿನಿಮಾಗಾಗಿ ರವಿಶಂಕರ್  ಡೈರೆಕ್ಷರ್ ಕ್ಯಾಪ್ ತೊಡಲಿದ್ದಾರೆ.

ದಸರಾ ಹಬ್ಬದ ವೇಳೆ ಅಧ್ವಯ್ ಶಂಕರ್ ಅವರ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ‌ ಮಾಡಲಾಗಿದೆ. ಈ ಚಿತ್ರಕ್ಕೆ ಸುಬ್ರಹ್ಮಣ್ಯ ಎಂಬ ಶೀರ್ಷಿಕೆ ಇಡಲಾಗಿದೆ. ಪೋಸ್ಟರ್‌ನಲ್ಲಿ ನಾಯಕ ಅಧ್ವಯ್ ಶಂಕರ್‌ ಒಂದು ಕೈಯಲ್ಲಿ ಜ್ವಾಲೆ ಮತ್ತು ಇನ್ನೊಂದು ಕೈಯಲ್ಲಿ ನಿಗೂಢವಾಗಿ ಕಾಣುವ ಪುಸ್ತಕವನ್ನು ಹಿಡಿದುಕೊಂಡು ಲುಕ್ ಕೊಟ್ಟಿದ್ದಾರೆ.

ಸುಬ್ರಹ್ಮಣ್ಯ ಸಿನಿಮಾಗೆ ಕೆಜಿಎಫ್, ಸಲಾರ್ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ, ವಿಜಯ್ ಎಂ ಕುಮಾರ್ ಸಂಕಲನ, ಮಾಸ್ತಿ ಸಂಭಾಷಣೆ, ರಾಜ್ ತೋಟ ಕ್ಯಾಮೆರಾ ವರ್ಕ್ ಇದೆ. ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್ ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಬಂಡವಾಳ ಹಾಕಿದ್ದು, ಪ್ರವೀಣಾ ಕಡಿಯಾಲ ಹಾಗೂ ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ಡಿಸೆಂಬರ್ ತಿಂಗಳಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

ರವಿಶಂಕರ್ 20 ವರ್ಷಗಳ ಹಿಂದೆ ನಟಿ ಮಾಲಾಶ್ರೀ ಅಭಿನಯದ ದುರ್ಗಿ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು.  ಸಿನಿಮಾ ಸೂಪರ್  ಹಿಟ್ ಆಗಿ ತೆಲುಗಿಗೆ ರಿಮೇಕ್  ಆಗಿತ್ತು. ನಂತರ ಅವರು ನಿರ್ದೇಶನದತ್ತ ಮುಖ ಮಾಡಿರಲಿಲ್ಲ.

ರವಿ ಶಂಕರ್ ಸುದೀಪ್ ನಟನೆಯ ‘ಕೆಂಪೇಗೌಡ’ ಸಿನಿಮಾದಲ್ಲಿ ಆಮುರ್ಗಂ ಪಾತ್ರದ ಮೂಲಕ  ಆರ್ಭಟಿಸಿದ ಬಳಿಕ  ಮತ್ತೆ ಹಿಂತಿರುಗಿ ನೋಡಿಲ್ಲ. ಈಗ ಅವರು ಹೆಚ್ಚು ಬ್ಯುಸಿ ಇರುವ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ರವಿಶಂಕರ್ ಅವರು ವಿದೇಶದಲ್ಲಿ ನಟನಾ ತರಬೇತಿಯನ್ನು ಪಡೆದು, ವಾಪಾಸ್ ಹುಟ್ಟೂರಿಗೆ ಮರಳಿರುವ ಮಗನನ್ನು ಬಣ್ಣದ ಜಗತ್ತಿಗೆ ಪರಿಚಯ ಮಾಡಿಸುತ್ತಿದ್ದಾರೆ. ತಂದೆ -ಮಗನ ಕೆಮೆಸ್ಟ್ರಿ ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವ ಕುತೂಹಲ ಸಿನಿಮಾಸಕ್ತರಲ್ಲಿ ಮೂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!