ರಾನಿ ಚಿತ್ರದ ಬಿಡುಗಡೆ ಮುಂದಕ್ಕೆ

ಕಿರಣ್ ರಾಜ್ ಅಭಿನಯಿಸಿರುವ ರಾನಿ ಚಿತ್ರದ ಬಿಡುಗಡೆಯನ್ನು ಎರಡು ವಾರ ಮುಂದಕ್ಕೆ ಹಾಕಲಾಗಿದೆ.

ಚಿತ್ರ ಆಗಸ್ಟ್ 30 ರಂದು ಬಿಡುಗಡೆ ಆಗಬೇಕಾಗಿತ್ತು. ಆದರೆ ಭೀಮ ಮತ್ತು ಕೃಷ್ಣಂ ಪ್ರಣಯ ಸಖಿ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾರಣ ಚಿತ್ರದ ಪ್ರದರ್ಶನಕ್ಕೆ ಸಮಸ್ಯೆ ಉಂಟಾಗಬಾರದು ಎಂದು ಬಿಡುಗಡೆ ದಿನಾಂಕವನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಲಾಗಿದೆ.

ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದೆ. ಚಿತ್ರ ಎಲ್ಲರಿಗೂ ದೊಡ್ಡಮಟ್ಟದಲ್ಲಿ ರೀಚ್ ಆಗಬೇಕು ಎನ್ನುವ ಕಾರಣಕ್ಕೆ ಬಿಡುಗಡೆ ಮುಂದೂಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಗುರುವೇಂದ್ರ ಶೆಟ್ಟಿ, ಚಿತ್ರ ಆಗಸ್ಟ್ 30ರಂದು ಬಿಡುಗಡೆ ಆಗಬೇಕಾಗಿತ್ತು. ಆದರೆ ಭೀಮ ಹಾಗೂ ಕೃಷ್ಣಂ ಪ್ರಣಯ ಸಖಿ ಚಿತ್ರಗಳು ಚೆನ್ನಾಗಿ ಹೋಗುತ್ತಿರುವುದರಿಂದ ವಿತರಕರು ಚಿತ್ರಮಂದಿರಗಳ ಸಮಸ್ಯೆ ಆಗಬಹುದು ಎಂದು ಹೇಳಿದರು. ಚೆನ್ನಾಗಿ ಓಡುವಾಗ ಚಿತ್ರಮಂದಿರದಿಂದ ತೆಗೆಯುವುದು ಸರಿಯಲ್ಲ. ನಾವು ಚಿತ್ರ ಬಿಡುಗಡೆ ಮುಂದೆ ಮಾಡುತ್ತಿದ್ದೇವೆ ಎನ್ನುವುದು ಬೇಸರದ ವಿಷಯವಲ್ಲ. ಜನರು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ ಎನ್ನುವುದು ಖುಷಿಯ ವಿಚಾರವಾಗಿದೆ. ಚಿತ್ರವನ್ನು ಸೆಪ್ಟೆಂಬರ್ 12ರಂದು ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ನಾಯಕ ಕಿರಣ್ ರಾಜ್ ಮಾತನಾಡಿ, ಪ್ರೇಕ್ಷಕರ ನಿರೀಕ್ಷೆಯನ್ನು ನಾವು ಹುಸಿ ಮಾಡುವುದಿಲ್ಲ. ಈ ಚಿತ್ರಕ್ಕೆ ನಾವು ಸಾಕಷ್ಟು ಶ್ರಮ ಹಾಕಿದ್ದೇವೆ. ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು.

ನಿರ್ದೇಶಕರು ಒಂದಷ್ಟು ಸರ್ವೆ ಮಾಡಿದ್ದಾರೆ. ನನ್ನಿಂದ ಏನು ನಿರೀಕ್ಷೆ ಇರುತ್ತದೆ ಎಂದು ಕೇಳಲಾಗಿತ್ತು. ನಿರ್ದೇಶಕರು ಫ್ಯಾಮಿಲಿ ಚಿತ್ರದ ಜೊತೆಗೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನು ಕತೆಗೆ ಸೇರಿಸಿದ್ದಾರೆ ಎಂದರು.

ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗ್ಡೆ ನಿರ್ಮಾಣದ ರಾನಿ ಚಿತ್ರದಲ್ಲಿ ಸಮೀಕ್ಷಾ ಮತ್ತು ರಾಧ್ಯಾ ನಟಿಸಿದ್ದಾರೆ. ರಾಘವೇಂದ್ರ ಬಿ ಕೋಲಾರ ಅವರ ಛಾಯಾಗ್ರಹಣವಿದೆ. ವಿನೋದ್ ಮಾಸ್ಟರ್ ಸಾಹಸ ದೃಶ್ಯಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.  ರಾನಿ ಚಿತ್ರವು ಅದರ ವಿಶಿಷ್ಟ ಕಥಾಹಂದರಕ್ಕಾಗಿ ಸಾಕಷ್ಟು ನಿರೀಕ್ಷೆ ಉಂಟು ಮಾಡಿದೆ.


—–

Be the first to comment

Leave a Reply

Your email address will not be published. Required fields are marked *

Translate »
error: Content is protected !!