ಏಳು ವರ್ಷದ ಸಿನಿಮಾ ಕನಸನ್ನು ಬಿಚ್ಚಿಟ್ಟ’ರಣಬೇಟೆಗಾರ’

ಸ್ಯಾಂಡಲ್ ಪುಡ್ ನಲ್ಲಿ  ಹೊಸ ನಟ ನಿರ್ದೇಶಕರು, ತಮ್ಮ ಬಣ್ಣದ ಲೋಕದ ಕನಸು ಕಟ್ಟಿಕೊಳ್ಳಲು ಹಗಲು ರಾತ್ರಿ ಹೋರಾಟ ಮಾಡುತ್ತಾರೆ. ಗ್ರಾಮೀಣ ಭಾಗಳಿಂದ ಸ್ಯಾಂಡಲ್ ವುಡ್ ರಾಜ್ಯಧಾನಿ ಬೆಂಗಳೂರಿಗೆ ಎಂಟ್ರಿ ನೀಡಿ ಚಪ್ಪಲಿ ಹರಿದು ಹೋಗುವವರೆಗೂ ದಣಿದು, ಹೋರಾಟ ಮಾಡಿ, ಅನೇಕರು ಸ್ಟಾರ್ ನಟರಾಗಿದ್ದುಂಟು.

ಇತ್ತೀಚಿಗೆ ರಣಬೇಟೆಗಾರ ಸಿನಿಮಾದ ಮುಹೂರ್ತ  ಸಮಾರಂಭ ಕಾರ್ಯಕ್ರಮ ಕನ್ನಡ ಕಲಾವಿದರ ಸಂಘ ಬೆಂಗಳೂರನಲ್ಲಿ ನಡೆಯಿತು. ಟೈಟಲ್ ಪ್ರೋಮೋ ಬಿಡುಗಡೆಯನ್ನು ಭರ್ಜರಿಯಾಗಿ ಸಿನಿಮಾ ತಂಡ ಮಾಡಿದೆ. ಕಾರ್ ಡ್ರೈವರ್ ಆಗಿದ್ದ ಹುಡುಗ ಇದೀಗ ಬಿಗ್ ಬಜೆಟ್ ಸಿನಿಮಾ ಮಾಡಲು ರೆಡಿಯಾಗಿರುವುದು ಕುತೂಹಲದ ವಿಚಾರವಾಗಿದೆ.

ಮೂಲತಃ ಜಮಖಂಡಿಯವರಾದ ನಿರ್ದೇಶಕ ರಾಮ್ ತಮ್ಮ ಚೊಚ್ಚಲ ರಣಬೇಟೆಗಾರ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ನಿರ್ಮಾಪಕಿ ಅಶ್ವಿನಿ ಪಾಟೀಲ್ ಬಂಡವಾಳ ಹಾಕಲಿದ್ದಾರೆ. ತನ್ನ ಏಳು ವರ್ಷದ ಸಿನಿಮಾ ಕನಸನ್ನು ಬಿಚ್ಚಿಟ್ಟ ರಾಮ್, ಕಾರ್ ಡ್ರೈವರ್ ಆಗಿ ಬೆಂಗಳೂರು ಪ್ರವೇಶ ಮಾಡಿದ್ದೇನೆ. ಹಲವು ನಿರ್ಮಾಪಕ, ನಿರ್ದೇಶಕರ ಜೊತೆಗೆ ಸಿನಿಮಾ ಅನುಭವವನ್ನು ಪಡೆದುಕೊಂಡಿದ್ದೇನೆ ಎಂದು ಹಂಚಿಕೊಂಡರು.

ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ನೆರೆದಿರುವ ಅಭಿಮಾನಿಗಳು ಮತ್ತು ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಕಾರ್ಯಕ್ರಮದಲ್ಲಿ ನಿರ್ಮಾಪಕ ಅಣಜಿ ನಾಗರಾಜ್, ನಿರ್ದೇಶಕ ಎ.ಪಿ.ಅರ್ಜುನ್, ನಿರ್ದೇಶಕ ಮಹೇಶ್ ಬಾಬು ಹಾಗೂ ನಟ ವಿರಾಟ್ ಭಾಗಿಯಾಗಿದ್ದರು. ಒಬ್ಬ ಕಾರ್ ಡ್ರೈವರ್ ತನ್ನ ಕನಸನ್ನು ನನಸು ಮಾಡಿಕೊಳ್ಳಲು ರಣಬೇಟೆಗಾರನ ಸೂತ್ರಧಾರನಾಗಿ ಬರಲಿದ್ದಾರೆ.

ಟೈಟಲ್ ಪ್ರೋಮೋ ಕುತೂಹಲಕರವಾಗಿದ್ದು ನಾಯಕ ನಟನಾಗಿ ಹೊಸ ಪ್ರತಿಭೆ ಪೃಥ್ವಿರಾಜ್ ನಾಯಕಿ ನಟಿ ತನುಜಾ ಬಿ.ವಿ. ಹಾಗೂ ಚೇತನ್ ಕೃಷ್ಣನ್, ದಯಾನಂದ್ ನೀನಾಸಂ, ಗೌತಮ್ ನಾಯ್ಡು, ಶಾಹಿದ್ ಅಲಿ, ಮುನಿ ತಾರಾಗಣದಲ್ಲಿದ್ದು ಹೊಸಬರ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ.

This Article Has 2 Comments
  1. Pingback: 1traction

Leave a Reply

Your email address will not be published. Required fields are marked *

Translate »
error: Content is protected !!