ರಾಗಿಣಿ ಜೊತೆ ಮಾತು-ಕತೆ! ಇಂಡಸ್ಟ್ರಿ ಬಿಡ್ತಾರಾ ತುಪ್ಪದ ಬೆಡಗಿ….?!

ಸ್ಯಾಂಡಲ್ ವುಡ್ ನಲ್ಲಿ ನಟಿಮಣಿಯರು ಯಾವುದಾದರೂ ವಿವಾದದಲ್ಲಿ ಸಿಲುಕಿಕೊಂಡ್ರೇ ಸಾಕು ಮತ್ತೆ ಅವರ ಕೆರಿಯರ್ ಕತೆ ಗೋವಿಂದ. ಯಾವ ಪ್ರೊಡೊಸ್ಯರ್,ಡೈರೈಕ್ಟರ್ ಗಳು ಅವಕಾಶ ಕೊಡೋ ಗೋಜಿಗೆ ಹೋಗೋದಿಲ್ಲ. ಹೀಗಾಗಿ ನೊರೆಂಟು ಜೈಲಿನಲ್ಲೇ ಕಳೆದುಬಂದಿರೋ ರಾಗಿಣಿ ಕತೆ ಏನು ಅನ್ನೋ ಆತಂಕ ಅಭಿಮಾನಿಗಳನ್ನು ಕಾಡ್ತಿದೆ.

ರಾಗಿಣಿಯನ್ನು ಪ್ರಧಾನವಾಗಿಟ್ಟುಕೊಂಡು ಹಿಂದೆ ಹಲವು ಚಿತ್ರಗಳು ತೆರೆಗೆ ಬಂದಿದೆ.ಆದರೆ ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಾಗಿಣಿ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ.

ಹೀಗಾಗಿ ರಾಗಿಣಿ ಚಿತ್ರರಂಗದಿಂದ ದೂರ ಸರಿಯುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದರೆ ಪ್ರಶ್ನೆಗಳಿಗೆ ಸ್ವತಃ. ರಾಗಿಣಿ ಉತ್ತರಿಸಿದ್ದು ಇರೋ ಸಿನಿಮಾಗಳ ಕೆಲಸ ಮುಗಿಸಿ ಕೊಡ್ತಿನಿ ಎಂದಿದ್ದಾರೆ.

2021 ನನಗೆ ಪಾಸಿಟಿವ್ ಆಗಿದೆ. ಸಾಕಷ್ಟು ಹೊಸ ಚಿತ್ರಗಳಿಗೆ ಅವಕಾಶ ಬರ್ತಿದೆ. ನೋಡಿಕೊಂಡು ಆಯ್ಕೆ‌ಮಾಡಿಕೊಳ್ತಿದ್ದೇನೆ. ಇರೋ ಚಿತ್ರಗಳನ್ನು ಮುಗಿಸೋದಿಕ್ಕೆ ಮೊದಲ ಆದ್ಯತೆ ಎಂದಿದ್ದಾರೆ.ನಾನು ಸಿನಿಮಾರಂಗ ಬಿಟ್ಟು ಎಲ್ಲೂ ಹೋಗೋದಿಲ್ಲ. ಸ್ಯಾಂಡಲ್ ವುಡ್ ನಲ್ಲಿ ಮತ್ತು ಕರ್ನಾಟಕದಲ್ಲೇ ಇರ್ತೇನೆ. ಇದೇ ನನ್ನ ಮನೆ ಎಂದಿದ್ದಾರೆ. ಸಧ್ಯ ದೇವರ ದರ್ಶನ ಹಾಗೂ ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಮೊದಲಿನಿಂದಲೂ ನನಗೆ ದೇವರಲ್ಲಿ ನಂಬಿಕೆ ಜಾಸ್ತಿ ಎಂದಿದ್ದಾರೆ.

ಎಲ್ಲವೂ ಒಳ್ಳೆದಾಗುತ್ತೆ ಅನ್ನೋ ದು ನನ್ನ‌ನಂಬಿಕೆ.‌ ನಂಬಿಕೆ ಮೇಲೆ ಜಗತ್ತು ನಿಂತಿದೆ ಎಂದು ರಾಗಿಣಿ ಉತ್ತರಿಸೋ ಮೂಲಕ ಕೇಸ್ ನಿಂದ ನಿರಪರಾಧಿಯಾಗಿ ಹೊರಗೆ ಬರೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!