ಮಾ.20ರಂದು ಪುನೀತ್ ಹುಟ್ಟುಹಬ್ಬದ ಮೆರವಣಿಗೆ

ಜೇಮ್ಸ್ ಬಿಡುಗಡೆಯ ಜೊತೆಗೆ ಮಾರ್ಚ್ 17ರಿಂದ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ನಾಲ್ಕು ದಿನಗಳ ಕಾಲ ನಿರಂತರವಾಗಿ ಆಚರಣೆ ಮಾಡಲು ಅಭಿಮಾನಿಗಳು ಮುಂದಾಗಿದ್ದಾರೆ.

ಅಭಿಮಾನಿಗಳೇ ಸೇರಿಕೊಂಡು ಹಣ ಒಟ್ಟುಗೂಡಿಸಿ ಈ ಮೆರವಣಿಗೆ ಮಾಡಲಿದ್ದಾರೆ. ಈಗಾಗಲೇ ಅಭಿಮಾನಿಗಳು ದೊಡ್ಮನೆಗೆ ಆಹ್ವಾನ ನೀಡಿದ್ದು, ಅಲ್ಲಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ಮಾರ್ಚ್ 20ರಂದು ಅಭಿಮಾನಿಗೆಲ್ಲಾ ಸೇರಿಕೊಂಡು ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಂಡಿದ್ದಾರೆ. ರಾಜಾಜಿನಗರ 6ನೇ ಹಂತದಿಂದ ಕಂಠೀರವ ಸ್ಡುಡಿಯೋದ ವೀರೇಶ್ ಚಿತ್ರಮಂದಿರದವರೆಗೂ ಅಪ್ಪು ಫೋಟೊ ಹಿಡಿದು ಅಭಿಮಾನಿಗಳು ಮೆರವಣಿಗೆ ಮೂಲಕ ಸಾಗಲಿದ್ದಾರೆ. ಈ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಅಭಿಮಾನಿಗಳು ಶಿವಣ್ಣನಲ್ಲಿ ಮನವಿ ಮಾಡಿದ್ದು,ಶಿವಣ್ಣ ಮೆರವಣಿಗೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

ಶಿವರಾಜ್‌ಕುಮಾರ್ ಜೊತೆ ರೋರಿಂಗ್ ಸ್ಟಾರ್ ಶ್ರೀಮುರಳಿ, ರಾಘವೇಂದ್ರ ರಾಜ್‌ಕುಮಾರ್, ಪುತ್ರರಾದ ಯುವರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಹಾಗೂ ಧೀರೇನ್ ರಾಮ್ ಕುಮಾರ್ ಕೂಡ ಭಾಗವಹಿಸಲಿದ್ದಾರೆ. ಮಾರ್ಚ್ 20ರಂದು ಭಾನುವಾರ ಸಂಜೆ 4 ಗಂಟೆಯಿಂದ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಗುವುದು.

ಹೂವಿನ ಪಲ್ಲಕ್ಕಿಯನ್ನು ನಿರ್ಮಿಸಿ, ಅದರೊಳಗೆ ಪುನೀತ್ ರಾಜ್‌ಕುಮಾರ್ ಫೋಟೊವನ್ನು ಇಟ್ಟು ಅಭಿಮಾನಿಗಳು ಮೆರವಣಿಗೆ ಬರಲಿದ್ದಾರೆ. ಮೆರವಣಿಗೆ ಸಾಗುವ ದಾರಿಯ ಟೋಲ್‌ಗೇಟ್ ಬಳಿ 10 ಜೆಸಿಬಿಗಳು ಅಪ್ಪು ಭಾವಚಿತ್ರಕ್ಕೆ ಹೂವಿನ ಸುರಿಮಳೆಯನ್ನು ಸುರಿಸಲಿವೆ. ಮೆರವಣಿಗೆಯಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಲಿದ್ದಾರೆ. ಮೆರವಣಿಗೆ ವೀರೇಶ್ ಚಿತ್ರಮಂದಿರ ತಲುಪಿದ ಬಳಿಕ ಅಲ್ಲಿ ಕೇಕ್ ಕಟಿಂಗ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!