Prakarana Tanikha Hantadallide Movie Review: ಸಸ್ಪೆನ್ಸ್ ಮರ್ಡರ್ ಮಿಸ್ಟರಿ ‘ಪ್ರಕರಣ ತನಿಖಾ ಹಂತದಲ್ಲಿದೆ’

ಚಿತ್ರ: ಪ್ರಕರಣ ತನಿಖಾ ಹಂತದಲ್ಲಿದೆ
ನಿರ್ದೇಶನ: ಸುಂದರ್ ಎಸ್
ನಿರ್ಮಾಣ: ಚಿಂತನ್ ಕಂಬಣ್ಣ
ತಾರಾಗಣ: ಮಾಹಿನ್ ಕುಬೇರ್, ಮುತ್ತುರಾಜ್, ಪ್ರದೀಪ್ ಕುಮಾರ್, ಚಿಂತನ್ ಕಂಬಣ್ಣ, ಮಧು, ಗಣೇಶ್ ಇತರರು
ರೇಟಿಂಗ್: 3

ಮರ್ಡರ್ ಮಿಸ್ಟರಿ ಕಥೆಯ ಜೊತೆಗೆ ಸಸ್ಪೆನ್ಸ್ ಇರುವ ಚಿತ್ರ ಈ ವಾರ ತೆರೆಗೆ ಬಂದ ‘ಪ್ರಕರಣ ತನಿಖಾ ಹಂತದಲ್ಲಿದೆ’.

ಕೋಟ್ಯಂತರ ರೂಪಾಯಿ ಬೆಲೆಯ ಮಾದಕ ವಸ್ತು ಕಳ್ಳ ಸಾಗಣೆ ಜಾಲದಲ್ಲಿ ಖದೀಮರು ತೊಡಗಿರುವ ವೇಳೆಗೆ ಕೊಲೆ ನಡೆಯುತ್ತದೆ. ನಂತರ ಸರಣಿ ಕೊಲೆ ಮುಂದುವರೆಯುತ್ತದೆ. ಈ ಕೊಲೆಗಳ ಉದ್ದೇಶ ಏನು ಎನ್ನುವುದನ್ನು ತಿಳಿಯಲು ಸಿನಿಮಾ ನೋಡಬೇಕು.

ನಿರ್ದೇಶಕರು ಕಥೆಯನ್ನು ಕೇವಲ 95 ನಿಮಿಷದಲ್ಲಿ ಚುರುಕಾಗಿ ಹೇಳುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಅನಗತ್ಯವಾಗಿ ಯಾವುದೇ ವಿಷಯಗಳು ಕಥೆಯಲ್ಲಿ ಬಂದಿಲ್ಲ. ಹೊಸ ಕಲಾವಿದರು ಚಿತ್ರದಲ್ಲಿ ನಟಿಸಿರುವ ಕಾರಣ ಪೂರ್ವಗ್ರಹ ಇಲ್ಲದೆ ಚಿತ್ರವನ್ನು ನೋಡಬಹುದು.

ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಮಾಹಿನ್ ಕುಬೇರ್, ಚಿಂತನ್ ಕಂಬಣ್ಣ, ರಾಜ್ ಗಗನ್, ಮುತ್ತುರಾಜ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಮಾಹಿನ್ ಕಾಣಿಸಿಕೊಂಡಿದ್ದಾರೆ. ವೈದ್ಯರಾಗಿ ಎರಡು ಶೇಡ್ ಗಳಲ್ಲಿ ಚಿಂತನ್ ಕಂಬಣ್ಣ ನಟಿಸಿದ್ದಾರೆ.

ಯುವ ಜನತೆಯನ್ನು ದೊಡ್ಡದಾಗಿ ಕಾಡುತ್ತಿರುವ ಡ್ರಗ್ಸ್ ಪಿಡುಗು ವಿರುದ್ಧ ಸಂದೇಶ ನೀಡುವ ಯತ್ನವನ್ನು ಚಿತ್ರ ಮಾಡಿದೆ. ಚೊಕ್ಕದಾಗಿ ಚಿತ್ರ ಮೂಡಿ ಬಂದಿದ್ದು ಸಸ್ಪೆನ್ಸ್ ಚಿತ್ರಗಳನ್ನು ನೋಡುವವರಿಗೆ ಇದು ಇಷ್ಟವಾಗಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!