‘ಪಂಖುರಿ’ ಚಿತ್ರದ ನಾಯಕಿ ಕುಂದನಾ ರೆಡ್ಡಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

‘ಪಂಖುರಿ’ ಚಿತ್ರದ ನಾಯಕಿ ಕುಂದನಾ ರೆಡ್ಡಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಪ್ರತಿಯೊಬ್ಬರಿಗೂ ತಮ್ಮದೆ ತಮ್ಮದೆ ಆದ ಆಸೆ,ಆಕ್ಷಾಂಶೆಗಳು ಇರುತ್ತವೆ ಹಾಗೆ ಚಿಕ್ಕಂದಿನಲ್ಲೇ ಸೆಲೆಬ್ರಿಟಿಯಾಗುವ ಆಸೆ ಕಂಡಿದ್ದರು ಕುಂದನಾ. ಕಂಡ ಆಸೆಯನ್ನು ನೆರವೇರಿಸಿಕೊಳ್ಳಲು ಹಗಲಿರಳು ಶ್ರಮಿಸಿ ಇಂದು ಕಂಡ ಕನಸನ್ನು ಈಡೇರಿಸಿಕೊಂಡಿದ್ದಾರೆ. ಬಾಲ್ಯಾದ ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದರು . ಇದೀಗ ‘ಪಂಖುರಿ’ ಚಿತ್ರದ ಮೂಲಕ ಕನ್ನಡ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಪ್ರತಿಭೆಗೆ ತಕ್ಕ ಅವಕಾಶ..!

ಕುಂದನಾ ಸಧ್ಯ ಸ್ಯಾಂಡಲ್ ವುಡ್ ನಲ್ಲಿ sensation ಕ್ರಿಯೇಟ್ ಮಾಡಲು ಸಿದ್ಧವಾಗಿರುವ ಯುವ ಪ್ರತಿಭೆ. ಇವರು ಮೂಲತಃ  ಆಂಧ್ರದವರು . ಆದರೆ ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಕನ್ನಡ ಬಾಷೆಯನ್ನ ಲೀಲಾಜಾಲವಾಗಿ ಮಾತನಾಡುವ ಇವರು ಕನ್ನಡದ ಮನೆ ಮಗಳಾಗಿದ್ದಾಳೆ.  ಕುಂದನಾ ರೂಪದಲ್ಲಿ ಹೇಗೆ ಸೀರಿವಂತೆಯೊ. ವಿದ್ಯೆಯಲ್ಲಿಯೂ ಪ್ರವಿಣೆಯಾದ ಇವರು ಇ ಕಾಮರ್ಸ್ ನಲ್ಲಿ ಸ್ನಾಕೋತ್ತರ ಪದವಿ ಪಡೆದಿದ್ದು  ವೃತ್ತಿಯಾಗಿ ಎಂಎನ್ ಸಿ ಕಂಪನಿಯ ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೆ ಕನ್ನಡ ಚಿತ್ರರಂಗದ ಮೇಲಿರುವ ಆಸಕ್ತಿ ಪಂಖುರಿ ಚಿತ್ರದ ಮೂಲಕ ಬೆಳಕಿಗೆ ಬಂದಿದೆ. ಸುಂದರವಾದ ಮುಖ ಚಹರೆ, ಹೀರಿಯರ ಮೇಲಿನ ಗೌವರವ, ಎಲ್ಲರನ್ನೂ ಪ್ರೀತಿಸುವ ಇವರ ಮನೋಭಾವ  ಎಲ್ಲದಕಿಂತ ಹೆಚ್ಚಾಗಿ ತಮ್ಮ ಅಭಿನಯದ ಮೂಲಕವೆ ನಿರ್ಧೇಶಕ ದೋಸ್ತಿ ವಿ ಆನಂದ ಅವರ ಸಿನಿಮಾಕೆ ಆಯ್ಕೆಯಾಗಿದ್ದು. ಇನ್ನೂ ಹೆಸರಿಡದ ಎರಡು ಸಿನಿಮಾಕ್ಕೆ ಆಯ್ಕೆಯಾಗಿ ಗಾಂಧಿನಗರದಲ್ಲಿ ಸುದ್ಧಿಯಾಗಿದ್ದಾರೆ.

ಅಭಿನಯ ಪ್ರಧಾನ ಪಾತ್ರಗಳಲ್ಲಿ ಕುಂದನಾ ಆಸಕ್ತಿ

ಚಿಕ್ಕ ವಯಸ್ಸಿನಲ್ಲಿಯೇ ನಟಿಯಾಗುವ ಕನಸು ಕಂಡಿದ ಕುಂದನಾ ಸ್ಯಾಂಡಲ್ ವುಡ್ ನಾ ಹಿರಿಯ ನಟಿ ಲಕ್ಷ್ಮೀಯವರಿಂದ ಹಿಡಿದು ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ತನಕ  ಬಹುತೇಕರ ಅಭಿನಯಕ್ಕೆ ಮಾರುಹೋಗಿದ್ದಾರೆ. ಆಪ್ತಮಿತ್ತಾ, ಶ್ರೀ ಮಂಜುನಾಥ್ ಚಿತ್ರಗಳಲ್ಲಿನ ಸೌಂದರ್ಯ ಅವರ ನಟನೆಯನ್ನು ಬಹುವಾಗಿ ಮೆಚ್ಚುವ ಕುಂದನಾಗೆ ಅಂಥ ಪಾತ್ರಗಳನ್ನ ಮಾಡುವ ಆಸೆ ಇದೆಯಂತೆ. ಒಟ್ಟಾರೆ ಕೇವಲ ಒಂದು ಪಾತ್ರಕ್ಕೆ ಸಿಮೀತವಾಗದೆ ವಿಭಿನ್ನ ಪಾತ್ರಗಳಲ್ಲಿ ಅಭಿನಯನ ಮಾಡುವ ಆಸೆಯನ್ನ ಬಹಿರಂಗ ಪಡಿಸಿದ್ದಾರೆ.

ಕುಂದನ ಕೇವಲ ನಟನೆ ಮಾತ್ರವಲ್ಲದೆ ನೃತ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ಶಾಲಾ ದಿನಗಳು ಮತ್ತು ಕೆಲಸದಲ್ಲಿದ್ದಾಗ ಸಂಸ್ಥೆಯ ಕಾರ್ಯಕ್ರಮಗಳಲ್ಲಿಯೂ ಡ್ಯಾನ್ಸ್ ಮಾಡಿದ ಅನುಭವವೇ  ಅವರ ನೃತ್ಯದ ಗುಟ್ಟು ಎನ್ನುತ್ತಾರೆ ಈ ಉದಯ್ಯೊನ್ಮಕ ನಟಿ. ಜತೆಗೆ ನಟಿಯರಿಗೆ ದೇಹದ ಪ್ಲೆಕ್ಸಿಬಿಲಿಟಿ ಅತ್ಯಂತ ಅವಶ್ಯಕ ಹಾಗಾಗಿ  ನಿತ್ಯ ಯೋಗಾಭ್ಯಾಸ, ವಾಕಿಂಗ್,ಸೈಕ್ಲಿಂಗ್ ಮಾಡೋದು ಇವರ ದಿನಚರಿಯಲ್ಲೊಂದು ಪ್ರಮುಖ  ಅಂಶ.

ಶಾರದ ಪಾತ್ರದಲ್ಲಿ ಕುಂದನಾ

ಪ್ರಸ್ತುತ ಕುಂದನಾ ನಟಿಯಾಗಿರುವ ಪಂಖುರಿ ಸಿನಿಮಾ ಮಹಿಳಾ ದೌರ್ಜನ್ಯದ ವಿರುದ್ಧದ ಕತೆಯಾಗಿದ್ದು. ಚಿತ್ರದಲ್ಲಿ ಒಂಟಿ ಹೆಣ್ಣಿಗೆ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳೇನು ಎನ್ನುವುದನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಕುಂದನಾ ಜತೆ ಶಶಿಶೇಖರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಉತ್ತಮ ಪಾತ್ರದ ನಿರೀಕ್ಷೆಯಲ್ಲಿದ ನನ್ನಗೆ ಉತ್ತಮ ಅವಕಾಶ ದೊರಕಿದೆ ಎನ್ನುತ್ತಾರೆ ಯುವ ನಟಿ ಕುಂದಾನ. ಜತೆಗೆ ಪ್ರಕೃತಿ ಪಿಕ್ಚರ್ಸ್ ಬ್ಯಾನರ್ ನಲ್ಲಿ , ಅಫ್ಜಲ್ ಅವರ ಸಹಯೋಗದೊಂದಿಗೆ ಸಿನಿಮಾ ನಿರ್ಮಾಣದ ಮೂಲಕ ಯುವ ನಿರ್ಮಾಪಾಕಿಯೂ ಆಗಿರುವ ಪಂಖುರಿ ಚಿತ್ರದ ನಟಿ ಕುಂದನಾರಿಗೆ ಇನ್ನಷ್ಟು ಯಶಸ್ಸು ಅವಕಾಶಗಳು ಕನ್ನಡ ಸಿನಿರಂಗದಲ್ಲಿ ದೊರಕುವಂತಾಗಲ್ಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!