ಅನಾಥ ಮಕ್ಕಳ ಜೊತೆ ಕುಂದನಾ ರೆಡ್ಡಿ ಹುಟ್ಟುಹಬ್ಬ

ಪಂಖುರಿ ಸಿನಿಮಾದ ನಟಿ ಕುಂದನಾ ರೆಡ್ಡಿ ಅನಾಥ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು.

ಬೆತೆಲ್ ಚೈಲ್ಡ್ ಕೇರ್ ಸೆಂಟರ್ ನ ಮಕ್ಕಳ ಜೊತೆ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ ಮಾಡಿದರು. ನಾಳೆ ಪಂಖುರಿ ಚಿತ್ರದ ಟೀಸರ್ A2Music ನಲ್ಲಿ ಬಿಡುಗಡೆ ಆಗಲಿದೆ.

ಕುಂದನಾ ನಟಿಸಿರುವ ಪಂಖುರಿ ಸಿನಿಮಾ ಮಹಿಳಾ ದೌರ್ಜನ್ಯದ ವಿರುದ್ಧದ ಕತೆ ಹೊಂದಿದೆ. ಚಿತ್ರದಲ್ಲಿ ಒಂಟಿ ಹೆಣ್ಣಿಗೆ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳೇನು ಎನ್ನುವುದನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಕುಂದನಾ ಜತೆ ಶಶಿಶೇಖರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ಉತ್ತಮ ಪಾತ್ರದ ನಿರೀಕ್ಷೆಯಲ್ಲಿದ್ದ ನನಗೆ ಉತ್ತಮ ಅವಕಾಶ ದೊರಕಿದೆ ಎಂದು ಯುವ ನಟಿ ಕುಂದಾನ ಹೇಳಿದ್ದಾರೆ.

ಪ್ರಕೃತಿ ಪಿಕ್ಚರ್ಸ್ ಬ್ಯಾನರ್ ನಲ್ಲಿ , ಅಫ್ಜಲ್ ಅವರ ಸಹಯೋಗದೊಂದಿಗೆ ಸಿನಿಮಾ ನಿರ್ಮಾಣದ ಮೂಲಕ ಯುವ ನಿರ್ಮಾಪಕಿ ಆಗಿಯೂ ಪಂಖುರಿ ಚಿತ್ರದ ನಟಿ ಕುಂದನಾ ಭಡ್ತಿ ಹೊಂದಿದ್ದಾರೆ. ಶಾರದ ಪಾತ್ರದಲ್ಲಿ ಕುಂದನಾ ನಟಿಸುತ್ತಿದ್ದಾರೆ.

ಚಿಕ್ಕಂದಿನಲ್ಲೇ ಸೆಲೆಬ್ರಿಟಿಯಾಗುವ ಆಸೆ ಕಂಡಿದ್ದರು ಕುಂದನಾ. ಕುಂದನಾ ತಮ್ಮಆಸೆಯನ್ನು ನೆರವೇರಿಸಿಕೊಳ್ಳಲು ಹಗಲಿರಳು ಶ್ರಮಿಸಿ ಇಂದು ಕಂಡ ಕನಸನ್ನು ಈಡೇರಿಸಿಕೊಂಡಿದ್ದಾರೆ. ಬಾಲ್ಯದ ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದರು . ಇದೀಗ ‘ಪಂಖುರಿ’ ಚಿತ್ರದ ಮೂಲಕ ಕನ್ನಡ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕುಂದನಾ ಸಧ್ಯ ಸ್ಯಾಂಡಲ್ ವುಡ್ ನಲ್ಲಿ sensation ಕ್ರಿಯೇಟ್ ಮಾಡಲು ಸಿದ್ಧವಾಗಿರುವ ಯುವ ಪ್ರತಿಭೆ. ಇವರು ಮೂಲತಃ  ಆಂಧ್ರದವರು. ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಕನ್ನಡವನ್ನು ಲೀಲಾಜಾಲವಾಗಿ ಮಾತನಾಡುವ ಇವರು ಕನ್ನಡದ ಮನೆ ಮಗಳಾಗಿದ್ದಾಳೆ.

ಕುಂದನಾ ರೂಪದಲ್ಲಿ ಸಿರಿವಂತೆ ಆಗಿದ್ದು, ಇ ಕಾಮರ್ಸ್ ನಲ್ಲಿ ಸ್ನಾಕೋತ್ತರ ಪದವಿ ಪಡೆದಿದ್ದಾರೆ. ಎಂಎನ್ ಸಿ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೆ ಕನ್ನಡ ಚಿತ್ರರಂಗದ ಮೇಲಿರುವ ಆಸಕ್ತಿ ಪಂಖುರಿ ಚಿತ್ರದ ಮೂಲಕ ಬೆಳಕಿಗೆ ಬಂದಿದೆ.

ಕುಂದನಾ ಸುಂದರವಾದ ಮುಖ ಚಹರೆ, ತಮ್ಮ ಅಭಿನಯದ ಮೂಲಕ ನಿರ್ದೇಶಕ ದೋಸ್ತಿ ವಿ ಆನಂದ ಅವರ ಸಿನಿಮಾಕೆ ಆಯ್ಕೆಯಾದರು. ಇನ್ನೂ ಹೆಸರಿಡದ ಎರಡು ಸಿನಿಮಾಕ್ಕೆ ಆಯ್ಕೆಯಾಗಿ ಗಾಂಧಿನಗರದಲ್ಲಿ ಸುದ್ಧಿಯಾಗಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ನಟಿಯಾಗುವ ಕನಸು ಕಂಡಿದ ಕುಂದನಾ ಸ್ಯಾಂಡಲ್ ವುಡ್ ಹಿರಿಯ ನಟಿ ಲಕ್ಷ್ಮೀಯವರಿಂದ ಹಿಡಿದು ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ತನಕ  ಬಹುತೇಕರ ಅಭಿನಯಕ್ಕೆ ಮಾರುಹೋಗಿದ್ದಾರೆ. ಆಪ್ತಮಿತ್ರ, ಶ್ರೀ ಮಂಜುನಾಥ ಚಿತ್ರಗಳಲ್ಲಿನ ಸೌಂದರ್ಯ ಅವರ ನಟನೆಯನ್ನು ಬಹುವಾಗಿ ಮೆಚ್ಚುವ ಕುಂದನಾಗೆ ಅಂಥ ಪಾತ್ರಗಳನ್ನ ಮಾಡುವ ಆಸೆ ಇದೆಯಂತೆ. ಒಟ್ಟಾರೆ ಕೇವಲ ಒಂದು ಪಾತ್ರಕ್ಕೆ ಸಿಮೀತವಾಗದೆ ವಿಭಿನ್ನ ಪಾತ್ರಗಳಲ್ಲಿ ಅಭಿನಯನ ಮಾಡುವ ಆಶಯ ಬಹಿರಂಗ ಪಡಿಸಿದ್ದಾರೆ.

ಕುಂದನ ಕೇವಲ ನಟನೆ ಮಾತ್ರವಲ್ಲದೆ ನೃತ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ಶಾಲಾ ದಿನಗಳು ಮತ್ತು ಕೆಲಸದಲ್ಲಿದ್ದಾಗ ಸಂಸ್ಥೆಯ ಕಾರ್ಯಕ್ರಮಗಳಲ್ಲಿಯೂ ಡ್ಯಾನ್ಸ್ ಮಾಡಿದ ಅನುಭವ ಇದೆ. ನಟಿಯರಿಗೆ ದೇಹದ ಪ್ಲೆಕ್ಸಿಬಿಲಿಟಿ ಅತ್ಯಂತ ಅವಶ್ಯಕ. ಹಾಗಾಗಿ  ನಿತ್ಯ ಯೋಗಾಭ್ಯಾಸ, ವಾಕಿಂಗ್,ಸೈಕ್ಲಿಂಗ್ ಮಾಡೋದು ಇವರ ದಿನಚರಿಯಲ್ಲೊಂದು.

ಯುವ ನಟಿಗೆ ಇನ್ನಷ್ಟು ಯಶಸ್ಸು, ಅವಕಾಶಗಳು ಕನ್ನಡ ಸಿನಿರಂಗದಲ್ಲಿ ದೊರಕುವಂತಾಗಲಿ ಎಂದು ಹಿತೈಷಿಗಳು ಹಾರೈಸಿದ್ದಾರೆ.

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!