ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯದಲ್ಲಿ ಕಾಲಿಟ್ಟಾಗ ಡಿಎಂಕೆ ಅವರನ್ನು ಬೆದರಿಸಿತು ಎಂಬ ಟಿವಿಕೆ ಪಕ್ಷದ ನಾಯಕ ಆಧವ್ ಅರ್ಜುನ್ ಅವರ ಹೇಳಿಕೆ ವಿರೋಧಕ್ಕೆ ಕಾರಣವಾಗಿದೆ.
ನಟ ಹಾಗೂ ತಮಿಳು ವೆಟ್ರಿ ಸಂಸ್ಥಾಪಕ ವಿಜಯ್, ರಜನಿಕಾಂತ್ ಮಾಜಿ ಸಲಹೆಗಾರ ರಾ. ಅರ್ಜುನಮೂರ್ತಿ ಅವರು ಆಧವ್ ಅರ್ಜುನನ ಹೇಳಿಕೆಗಳನ್ನು ಖಂಡಿಸಿದ್ದಾರೆ. “ಇಂತಹ ಸುಳ್ಳು ಹೇಳಿಕೆಗಳು ರಾಜಕೀಯ ಲಾಭ ಪಡೆಯಲು ಮಾತ್ರ ಉದ್ದೇಶಿತವಾಗಿವೆ” ಎಂದಿದ್ದು, ಅರ್ಜುನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಂತೆಯೇ ತಮಿಳುನಾಡು ಸಚಿವ ಎಸ್. ರೆಗುಪತಿ ಅವರು ಟಿವಿಕೆ ವಿರುದ್ಧ ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ. “ರಜನಿಕಾಂತ್ ಅವರು ಡಿಎಂಕೆಯ ಸ್ನೇಹಿತರಾಗಿದ್ದು, ಅವರನ್ನು ಬೆದರಿಸಲು ಸಾಧ್ಯವಿಲ್ಲ. 1996ರಲ್ಲಿ ರಜನಿ ಡಿಎಂಕೆಗಾಗಿ ಬೆಂಬಲ ನೀಡಿದ್ದಾರೆ. ಸುಳ್ಳು ಆರೋಪ ಮಾಡುವುದು ರಾಜಕೀಯ ಲಾಭ ಪಡೆಯುವ ಪ್ರಯತ್ನ” ಎಂದು ಹೇಳಿದ್ದಾರೆ.
ರಜನಿ ವಿರುದ್ಧದ ವಿವಾದದ ಹೇಳಿಕೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ರಜನಿಕಾಂತ್ ಅವರನ್ನು ಟೀಕಿಸುವ ಉದ್ದೇಶವಿಲ್ಲದಿದ್ದರೂ ಈ ಹೇಳಿಕೆ ರಾಜಕೀಯ ಪರಿಣಾಮಗಳಿಗೆ ಕಾರಣವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
—-





Be the first to comment