‘ ಆಪರೇಷನ್ ಸಿಂಧೂರ್’ ಶೀರ್ಷಿಕೆಯನ್ನು ನೋಂದಾಯಿಸಲು ಬಾಲಿವುಡ್ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ.
ಮಹಾವೀರ್ ಜೈನ್ ಫಿಲ್ಮ್ಸ್ ಈ ಶೀರ್ಷಿಕೆಯನ್ನು ನೋಂದಾಯಿಸಿದ ಮೊದಲ ಬ್ಯಾನರ್ ಆಗಿದೆ. ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಕೂಡ ಈ ಶೀರ್ಷಿಕೆಯನ್ನು ನೋಂದಾಯಿಸಿದ್ದಾರೆ. ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆಗಳಾದ ಜೀ ಸ್ಟುಡಿಯೋಸ್ ಮತ್ತು ಟಿ-ಸೀರೀಸ್ ಈ ಶೀರ್ಷಿಕೆಯನ್ನು ನೋಂದಾಯಿಸಿದ ನಿರ್ಮಾಣ ಸಂಸ್ಥೆಗಳು. ಈ ಎಲ್ಲಾ ಬ್ಯಾನರ್ಗಳು ಇತ್ತೀಚಿನ ಕಾರ್ಯಾಚರಣೆ ಮತ್ತು ಪಹಲ್ಗಾಮ್ ದಾಳಿಯನ್ನು ಆಧರಿಸಿ ಈ ಶೀರ್ಷಿಕೆಯಡಿಯಲ್ಲಿ ಸಿನಿಮಾ ನಿರ್ಮಿಸಲು ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ನಿಯಮಗಳ ಪ್ರಕಾರ ಮೊದಲು ನೋಂದಾಯಿಸಿದ ನಿರ್ಮಾಪಕರಿಗೆ ಶೀರ್ಷಿಕೆ ಸಿಗುತ್ತದೆ. ಯಾವ ಬ್ಯಾನರ್ ಅಂತಿಮವಾಗಿ ಈ ಶೀರ್ಷಿಕೆಯೊಂದಿಗೆ ಚಿತ್ರವನ್ನು ಘೋಷಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 29ಕ್ಕೂ ಹೆಚ್ಚು ಪ್ರವಾಸಿಗರನ್ನು ಉಗ್ರರು ಕೊಂದು ಹಾಕಿದ್ದರು. ಪಹಲ್ಗಾಮ್ ದಾಳಿಗೆ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ 9 ಭಯೋತ್ಪಾದನ ತಾಣಗಳನ್ನು ಧ್ವಂಸ ಮಾಡಲಾಗಿದೆ. 25 ನಿಮಿಷದಲ್ಲಿ ನಡೆದ ಕಾಯಾರ್ಚರಣೆಯಲ್ಲಿ 70ಕ್ಕೂ ಹೆಚ್ಚು ಉಗ್ರರನ್ನು ಭಾರತ ಉಡೀಸ್ ಮಾಡಿದೆ.
—-

Be the first to comment