ಕಾಂತಾರ ಚಿತ್ರತಂಡಕ್ಕೆ ನೋಟಿಸ್!

‘ಕಾಂತಾರ ಚಾಪ್ಟರ್-1’ ಚಿತ್ರತಂಡ  ಅನುಮತಿ ಪಡೆಯದೆ ಚಿತ್ರೀಕರಣ ನಡೆಸಿದ ಆರೋಪದ ಮೇಲೆ ಹೊಸನಗರ ತಹಸಿಲ್ದಾರ್  ನೋಟಿಸ್ ಜಾರಿ ಮಾಡಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್-1’ ಚಿತ್ರತಂಡ, ಮಾಣಿ ಜಲಾಶಯದಲ್ಲಿ ಅನುಮತಿ ಪಡೆಯದೆ ಚಿತ್ರೀಕರಣ ನಡೆಸಿದ ಆರೋಪದ ಮೇಲೆ 3 ದಿನಗಳಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

ಕಾಂತಾರ ಚಿತ್ರತಂಡ  ಸಿನಿಮಾ ಚಿತ್ರೀಕರಣಕ್ಕಾಗಿ ವಿವಿಧ ಇಲಾಖೆಗಳಿಂದ ಪಡೆದ ಅನುಮತಿಯ ವಿವರಗಳು ಹಾಗೂ ದಾಖಲಾತಿಗಳನ್ನು ತಹಸಿಲ್ದಾರರಿಗೆ ಸಲ್ಲಿಸಬೇಕಿದೆ.   ತಾಲೂಕು ಹಾಗೂ ಜಿಲ್ಲಾ ಆಡಳಿತಕ್ಕೆ ಯಾವುದೇ ಮಾಹಿತಿ ನೀಡದೇ ಚಿತ್ರೀಕರಣ ನಡೆಸಿರುವ ಆರೋಪ ಚಿತ್ರತಂಡದ ಮೇಲೆ ಇದೆ.

ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಮಾಣಿ ಜಲಾಶಯದ ಹಿನ್ನೀರಿನಲ್ಲಿ ನಡೆಸಲಾದ ಕಾಂತಾರ: ದಿ ಲೆಜೆಂಡ್ – ಭಾಗ 1 ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಹೊಸನಗರ ತಹಸಿಲ್ದಾರ್ ರಶ್ಮಿ  ಚಿತ್ರತಂಡಕ್ಕೆ  ನೋಟಿಸ್ ಜಾರಿ ಮಾಡಿದ್ದಾರೆ. ಜೂನ್ 15ರಂದು ನಡೆದ ದೋಣಿ ಮುಗುಚಿ 30 ಜನರು ನೀರಿಗೆ ಬಿದ್ದಿರುವ ಘಟನೆ ಬಗ್ಗೆ 3 ದಿನಗಳ ಒಳಗೆ  ಸ್ಪಷ್ಟನೆ ನೀಡುವಂತೆ ಸೂಚಿಸಿ ನೋಟಿಸ್‌ಗೆ ಉತ್ತರ ನೀಡುವಂತೆ ತಾಕೀತು ಮಾಡಲಾಗಿದೆ.

ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಮೇಲಿನ ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಶೂಟಿಂಗ್‌ ಸಮಯದಲ್ಲಿ ಕಲಾವಿದರಿಗೆ ಏನೂ ಆಗಿಲ್ಲ.  ಜಲಾಶಯ ಪಕ್ಕದಲ್ಲಿ ಯಾವುದೇ ಚಿತ್ರಿಕರಣ ಮಾಡಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ ಕೊಟ್ಟಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!