ಮತ್ತೆ ಒಂದಾದ ಮಹೇಂದರ್ -ಹಂಸಲೇಖ

ಕನ್ನಡ ಚಿತ್ರೋದ್ಯಮದಲ್ಲಿ ಹಿಟ್‌ ಚಿತ್ರಗಳನ್ನು ನೀಡಿದ ನಿರ್ದೇಶಕ ಎಸ್ ಮಹೇಂದರ್ ಮತ್ತು ಸಂಗೀತ ಮಾಂತ್ರಿಕ ಹಂಸಲೇಖ ಮತ್ತೆ ಒಂದಾಗುತ್ತಿದ್ದಾರೆ.

ಕಳೆದ 33 ವರ್ಷಗಳಲ್ಲಿ 20 ಹಿಟ್‌ ಚಿತ್ರಗಳನ್ನು ನೀಡಿದ ಎಸ್ ಮಹೇಂದರ್ ಮತ್ತು  ಹಂಸಲೇಖ ಸಹಯೋಗ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸಿದೆ. ಜನವರಿ 16ರ ಸಂಕ್ರಾಂತಿ ಹಬ್ಬದಂದು ಚಿತ್ರದ ಶೀರ್ಷಿಕೆಯನ್ನು  ಅನಾವರಣಗೊಳಿಸಲು ಮತ್ತು ತಾರಾಗಣವನ್ನು ಪರಿಚಯಿಸಲು ಚಿತ್ರತಂಡ ಸಜ್ಜಾಗಿದೆ.

ಮಹೇಂದರ್  ಗ್ರಾಮೀಣ ಭಾಗದ ಕಥೆಯನ್ನು ತೆರೆ ಮೇಲೆ ತರಲು ಹೆಸರುವಾಸಿಯಾಗಿದ್ದಾರೆ. ಹಂಸಲೇಖ ಕನ್ನಡ ಚಿತ್ರರಂಗದಲ್ಲಿ  ಎವರ್‌ಗ್ರೀನ್ ಹಾಡುಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಹೊಸ  ಚಿತ್ರವನ್ನು ಶ್ರೀ ಗುರು ರಾಯರು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕೆ ಸಿ ವಿಜಯ್‌ಕುಮಾರ್ ನಿರ್ಮಿಸಿದ್ದಾರೆ.

ಶೃಂಗಾರ ಕಾವ್ಯ, ಸ್ನೇಹಲೋಕ, ಗಟ್ಟಿ ಮೇಳ, ಗೌಡ್ರು, ಕರ್ಪೂರದ ಗೊಂಬೆ, ಕೊಡಗಿನ ಕಾವೇರಿ, ತಾಯಿ ಇಲ್ಲದ ತವರು, ಕೌರವ, ಹೆತ್ತವರು, ಚಂದ್ರೋದಯದಂತಹ ಹಿಟ್‌ ಚಿತ್ರಗಳು  ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸ್ಥಾನ ಪಡೆದಿರುವುದರಿಂದ ಇವರಿಬ್ಬರ ಸಹಯೋಗ ಕನ್ನಡ ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಜನವರಿ 16 ರಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ. ಈ ಚಿತ್ರ ಪ್ರೇಕ್ಷಕರಿಗೆ ಹೊಸ ಸಿನಿಮೀಯ ಅನುಭವವನ್ನು ನೀಡುವ ಗುರಿಯನ್ನು  ಹೊಂದಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!