ಪ್ರಥಮ್ ಗೆ ಆ್ಯಕ್ಚನ್ ಪ್ರಿನ್ಸ್ ದ್ರುವ ಸರ್ಜಾ ಸಾಥ್!

ಕನ್ನಡದಲ್ಲಿ ಒಂದು ಸಿನಿಮಾ ಮೂಡಿಬರುವಾಗ ಅದಕ್ಕೆ ಬೇರೆ ತಾರೆಯರು ಬೆಂಬಲಿಸುವುದನ್ನು ಕಂಡಿರುತ್ತೇವೆ. ಆದರೆ ಪ್ರಥಮ್ ಅವರ ‘ನಟ ಭಯಂಕರ’ ಚಿತ್ರದಲ್ಲಿ ಹಲವಾರು ತಾರೆಯರು ತಮ್ಮ ಬೆಂಬಲ ನೀಡಿರುವುದನ್ನು ಕಾಣಬಹುದಾಗಿದೆ. ಅವರಲ್ಲಿ ಈಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜ ಹೊಸ ಸೇರ್ಪಡೆಯಾಗಿದ್ದಾರೆ.

ಚಿತ್ರದ ಆರಂಭ ಅಂತ್ಯ ಸೇರಿದಂತೆ ಮಧ್ಯದಲ್ಲಿಯೂ‌ ಕತೆಗೆ ಒಂದು ಉತ್ತಮವಾದ ನಿರೂಪಣೆ ಬೇಕಿತ್ತು. ಧ್ರುವ ಸರ್ಜ ಅವರ ಸಂಭಾಷಣೆಯ ಶೈಲಿಗೆ ಅಪಾರವಾದ ಅಭಿಮಾನಿಗಳಿದ್ದಾರೆ. ಅಲ್ಲದೆ ಅವರು ನನಗೆ ಆತ್ಮೀಯರು ಕೂಡ. ಹಾಗಾಗಿ ಅವರದೇ ನಿರೂಪಣೆಗಾಗಿ ಪ್ರಯತ್ನಿಸೋಣವೆಂದು ಪ್ರಥಮ್ ಸಂಪರ್ಕಿಸಿದ್ದಾರೆ. ಧ್ರುವಸರ್ಜ ಅಬ್ಬಯ್ಯ ನಾಯ್ಡು ಸ್ಟುಡಿಯೋಗೆ ಬಂದು ವಾಯ್ಸ್ ಡಬ್ ಮಾಡಿಕೊಟ್ಟಿದ್ದಾರೆ. ಮಾತ್ರವಲ್ಲ, ಇದು ಪ್ರಥಮ್ ಮೇಲಿನ ಪ್ರೀತಿಗೆ ಎಂದು ಹೇಳಿರುವುದರಿಂದಾಗಿ ಯಾವುದೇ ಸಂಭಾವನೆಯನ್ನು ಕೂಡ ಪಡೆದುಕೊಂಡಿಲ್ಲ. ಆದರೆ ಪ್ರಥಮ್ ಅವರಿಗೆ ಸಂಭಾವನೆಯಾಗಿ‌ ನೀಡಲು ಬಯಸಿದಂಥ ಹಣವನ್ನು ಬೇಸಿಗೆ ತಾಪದಲ್ಲಿ ಬಳಲಿದ ಗೋವುಗಳ ಸಂರಕ್ಷಣೆಗೆ ಬಳಸುವಂತೆ ಗೋಶಾಲೆಗಳಿಗೆ ಕೊಡುಗೆಯಾಗಿ‌ ನೀಡಿದ್ದಾರೆ. ಚಿತ್ರ ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಚಿತ್ರದ ಆಡಿಯೋ‌ ಸಿಡಿ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ.

ಚಿತ್ರದಲ್ಲಿವೆ ಹಲವು ಮೊದಲುಗಳು!

ನಟ ಭಯಂಕರ ಪ್ರಥಮ್ ನಿರ್ದೇಶನದ ಪ್ರಥಮ ಚಿತ್ರ.
ಪ್ರಥಮ್ ಸ್ವತಃ ನಾಯಕರಾಗಿರುವ ಈ‌ ಚಿತ್ರದ ಮುಹೂರ್ತದಲ್ಲಿ ಹಿರಿಯ ರಾಜಕಾರಣಿ ಎಲ್ ಕೆ ಅಡ್ವಾನಿಯವರು ಚಿತ್ರದ ಕ್ಲಾಪ್ ಬೋರ್ಡ್ ಹಿಡಿದಿದ್ದರು.ಇದುವರೆಗೆ ಯಾವುದೇ ಬೇರೆ ತಾರೆಯರ ಚಿತ್ರದ ಸೆಟ್ ಗೂ‌ ಹೋಗಿರದ ಗೋಲ್ಡನ್ ಸ್ಟಾರ್ ಗಣೇಶ್ ‘ನಟ ಭಯಂಕರ’ ಸೆಟ್ ಗೆ ಭೇಟಿ ಕೊಟ್ಟಿದ್ದಾರೆ. ಚಿತ್ರದ ಎರಡು ದೃಶ್ಯಗಳಿಗೆ ಅಭಿಷೇಕ್ ಅಂಬರೀಶ್ ಆ್ಯಕ್ಷನ್ ಕಟ್ ಹೇಳಿರುವುದು ಮತ್ತೊಂದು ವಿಶೇಷ! ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ನಾಯಕನ ಇಂಟ್ರಡಕ್ಷನ್ ಗೀತೆಗೆ ಧ್ವನಿಯಾಗಿರುವುದು ಕೂಡ ಇದೇ ಚಿತ್ರದಲ್ಲೇ. ನಿಹಾರಿಕಾ ಶೆಣೈ ಮತ್ತು ಸುಷ್ಮಿತಾ ಜೋಶಿ ಚಿತ್ರದ ನಾಯಕಿಯರು.

This Article Has 2 Comments
  1. Pingback: Digital Transformation company

  2. Pingback: windshield replacement Cookeville

Leave a Reply

Your email address will not be published. Required fields are marked *

Translate »
error: Content is protected !!