ಮೈಲಾರಿ ಫಿಲಂಸ್ ನ‌ ಹೊಸ ಚಿತ್ರ ಶೀಘ್ರದಲ್ಲೇ ಆರಂಭ!

ಹಾಸನ ಮೂಲದ ಮೈಲಾರಿ ಗ್ರೂಪ್ ಆಫ್ ‌ಸಂಸ್ಥೆಯ ಮಾಲೀಕಾರಾದ ಮೈಲಾರಿ ಮಹೇಶ್ ಅವರು ನಿರ್ಮಿಸುತ್ತಿರುವ ನೂತನ ‌ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಇದು ಈ ಸಂಸ್ಥೆ ನಿರ್ಮಾಣದ ಮೊದಲ ಸಿನಿಮಾ.

ಎಸ್.ನಾರಾಯಣ್ ಅವರ ಬಳಿ ಕೆಲಸ ಮಾಡಿರುವ, ಅಮೃತ ವರ್ಷಿಣಿ, ಕೃಷ್ಣ ರುಕ್ಕು, ಲಕ್ಷ್ಮೀ ಬಾರಮ್ಮ, ಜೊತೆಜೊತೆಯಲಿ ಧಾರಾವಾಗಳಿಗೆ ಸಹ ನಿರ್ದೇಶನ ಮಾಡಿರುವ ರಾಜಚೈತನ್ಯ ಈ ಚಿತ್ರದ ನಿರ್ದೇಶಕರು.

ರಾಜ್ ಚೈತನ್ಯ ಅವರೆ ಕಥೆ, ಚಿತ್ರಕಥೆ ಬರೆದಿದ್ದು, ಗುರುರಾಜ್ ಎಂ ದೇಸಾಯಿ ಸಂಭಾಷಣೆ ಬರೆಯುತ್ತಿದ್ದಾರೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಡಾ||ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ರಾಜ ಚೈತನ್ಯ ಹಾಡುಗಳನ್ನು ಬರೆಯುತ್ತಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.

ಜಾನಿ, ಮುರಳಿ, ಚಿನ್ನಿಪ್ರಕಾಶ್, ಇಮ್ರಾನ್ ಸರ್ದಾರಿಯ ನೃತ್ಯ ನಿರ್ದೇಶನ, ರವಿವರ್ಮ, ವಿನೋದ್ ಹಾಗೂ ವಿಕ್ರಂ ಮೋರ್ (ಕೆ ಜಿ ಎಫ್) ಅವರ ಸಾಹಸ ‌ನಿರ್ದೇಶನ ಈ ಚಿತ್ರಕ್ಕಿದೆ.‌
ಮಹೇಶ್ ತಲಕಾಡು ಛಾಯಾಗ್ರಾಹಕರಾಗಿ, ಜೋ ನಿ ಹರ್ಷ ಸಂಕಲನಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೆಂಗಳೂರು, ಮೈಸೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದ ಶೀರ್ಷಿಕೆ ಹಾಗೂ ತಾರಾಬಳಗದ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!