ಕುತೂಹಲದ ಮರ್ಡರ್-2

ಕೊಲೆ ಎಂದ ಮೇಲೆ ಅದು ಮರ್ಡರ್‌ಎನ್ನುವುದು ತಿಳಿದಿದೆ. ಈಗ ಅಂತಹುದೆ ಹಸರಿನಲ್ಲಿ ‘ಮರ್ಡರ್-೨’ ಎನ್ನುವಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಭಾಗ-೧ ಸಿನಿಮಾಕ್ಕೆಕತೆ,ನಿರ್ದೇಶನ,ನಿರ್ಮಾಣ ಮಾಡಿರುವ ಮಂಡ್ಯಾನಾಗರಾಜು ಭಾಗ-೨ಕ್ಕೂ ಇದೇಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಂದಹಾಗೆಇವರದು ನಿರ್ದೇಶಕ, ನಿರ್ಮಾಪಕನಾಗಿ ಹದಿನಾಲ್ಕನೇ ಚಿತ್ರವಾಗಿರುವುದು ವಿಶೇಷ. ಸಂಪೂರ್ಣ ಮನರಂಜನೆಇರುವಕಾರಣಯಾವುದೇರೀತಿಯ ಹಾಡುಗಳು ಇರುವುದಿಲ್ಲ. ಗ್ರಾಮೀಣ ಭಾಗದಕತೆಯಲ್ಲಿ ಹುಡುಗಿ ಮನೆಯವರನ್ನುಎದುರು ಹಾಕಿಕೊಂಡುಅಕೆಯನ್ನುಕರೆದುಕೊಂಡು ಹೋದಾಗದೂರದ ಸ್ಥಳದಲ್ಲಿ ಘಟನೆ ನಡೆದು, ಕೊಲೆಗಳು ಆಗುತ್ತದೆ. ಅದರಿಂದ ಹೇಗೆ ಹೊರಗೆ ಬರುತ್ತಾನೆ, ಕೊಲೆಯ ಹಿಂದಿನ ಮರ್ಮವೇನೆಂದುಕಂಡು ಹಿಡಿಯುವುದೇಒನ್ ಲೈನ್ ಸ್ಟೊರಿಯಾಗಿದೆ.ಮೈಸೂರು ಮತ್ತು ಮಂಡ್ಯಾ ಸುಂದರ ತಾಣಗಳಲ್ಲಿ ೩೩ ದಿವಸಗಳ ಕಾಲ ಚಿತ್ರಿ ಕರಣ ನಡೆಸಲಾಗಿದೆ.
ಲವರ್ ಬಾಯ್ ಆಗಿ ಅನಂದ್‌ಗಣೇಶ್ ನಾಯಕ. ಶಾಲಿನಿ ನಾಯಕಿಯಾಗಿ ಪ್ರಥಮಅನುಭವ. ಪೋಲೀಸ್‌ಅಧಿಕಾರಿ ಪಾತ್ರದಲ್ಲಿ ದೀಪಕ್‌ಗಣೇಶ್, ಖಳನಾಗಿ ಲಿಂಗರಾಜ್‌ಇವರೊಂದಿಗೆಜಯರಾಮಣ್ಣ, ಅಪೂರ್ವ, ಕಿಲ್ಲರ್‌ವೆಂಕಟೇಶ್ ಮುಂತಾದವರು ನಟಿಸಿದ್ದಾರೆ.ಛಾಯಾಗ್ರಹಣರೇಣುಕಾರಾಧ್ಯ, ಸಾಹಸ ಅಶೋಕ್‌ರಾಜ್, ಸಂಕಲನ ಬೇಬಿನಾಗರಾಜು, ಸಂಗೀತಕುಮಾರ್‌ಅವರದಾಗಿದೆ. ಶುಕ್ರ ಫಿಲಿಂಸ್ ಮುಖಾಂತರ ೨೦ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಶುಕ್ರವಾರದಂದುತೆರೆಕಾಣಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!