Munindra : ಸಿನಿಮಾ ವಿತರಣೆಗೆ ಇಳಿದ ಮುನೀಂದ್ರ

ಕಳೆದ 15 ವರ್ಷಗಳಿಂದ ಕನ್ನಡ ಚಿತ್ರಗಳಲ್ಲಿ ಸಿನಿಮಾ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಮುನೀಂದ್ರ ಕೆ ಪುರ ಅವರು ವಿತರಣಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಅವರು ಗಾಂಧಿನಗರದಲ್ಲಿ ಮಾಧ್ಯಮಿಕ ಎಂಟರ್ಪ್ರೈಸಸ್ ಹೆಸರಿನ ಕಚೇರಿ ಆರಂಭಿಸಿದ್ದಾರೆ. ಇದರ ಮೂಲಕ ಚಿತ್ರ ನಿರ್ಮಾಣ ಮಾಡುವ ಜೊತೆಗೆ ವಿತರಣೆ ಮಾಡುವ ಉದ್ದೇಶವನ್ನು ಹೊಂದಿದ್ದಾರೆ.

ಕಚೇರಿಯ ಆರಂಭದ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್ಎಂ ಸುರೇಶ್, ಥ್ರಿಲ್ಲರ್ ಮಂಜು, ಮಾಜಿ ಸಚಿವ ಎಂ ಕೃಷ್ಣಪ್ಪ, ನಿರ್ಮಾಪಕರಾದ ಕನಕಪುರ ಶ್ರೀನಿವಾಸ್, ಮಂಜುನಾಥ್ ಬಾಬು, ನಿರ್ದೇಶಕ ಶಶಾಂಕ್, ನಾಯಕ ನಟ ರಾಜವರ್ಧನ್ ಸೇರಿದಂತೆ ಹಲವರು ಆಗಮಿಸಿ ಶುಭ ಕೋರಿದರು.

ಶೀಘ್ರದಲ್ಲಿ ಮಾಧ್ಯಮಿಕ ಎಂಟರ್ಪ್ರೈಸಸ್ ಮೂಲಕ ಹೊಸ ಚಿತ್ರ ನಿರ್ಮಾಣ ಮಾಡಲಾಗುವುದು ಎಂದು ಮುನೀಂದ್ರ ಹೇಳಿದ್ದಾರೆ. ಚಿತ್ರರಂಗಕ್ಕೆ ಬರುವ ಹೊಸಬರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!