ಈ ವಾರ ತೆರೆಗೆ ‘ಮೂಕಜ್ಜಿಯ ಕನಸುಗಳು’

ಖ್ಯಾತ ಸಾಹಿತಿ ಶಿವರಾಮ ಕಾರಂತರಿಗೆ eóÁ್ಞನಪೀಠ ಪ್ರಶಸ್ತಿ ತಂದು ಕೊಟ್ಟ ವಿಶಿಷ್ಟ ಕಾದಂಬರಿ `ಮೂಕಜ್ಜಿಯ ಕನಸುಗಳು`. ಈ ಕೃತಿಯನ್ನು ಆಧರಿಸಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ಚಲನಚಿತ್ರ ತಯಾರಿಸಿದ್ದಾರೆ. ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಪಿ.ಶೇಷಾದ್ರಿ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪ್ರವೀಣ್ ಗೋಡ್ಕಿಂಡಿ ಸಂಗೀತ ನೀಡಿದ್ದಾರೆ. ಜಿ.ಎಸ್.ಭಾಸ್ಕರ್ ಛಾಯಾಗ್ರಹಣ ಹಾಗೂ ಬಿ.ಎಸ್.ಕೆಂಪರಾಜು ಅವರ ಸಂಕಲನವಿರುವ ಈ ಚಿತ್ರವನ್ನು ನವ್ಯಚಿತ್ರ ಕ್ರಿಯೇಷನ್ಸ್ ನಿರ್ಮಿಸಿದೆ.

ಮೂಕಜ್ಜಿಯ ಪಾತ್ರದಲ್ಲಿ ಬಿ.ಜಯಶ್ರೀ ಅಭಿನಯಿಸಿದ್ದಾರೆ. ಅರವಿಂದ್ ಕುಪ್ಲಿಕರ್, ನಂದಿನಿ ವಿಠ್ಠಲ, ರಾಮೇಶ್ವರಿ ವರ್ಮ, ಪ್ರಗತಿ ಪ್ರಭು, ಕಾವ್ಯ ಶಾ, ಪ್ರಭುದೇವ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!