ಎಂ ಆರ್ ಪಿ ಟ್ರೇಲರ್ ಲಾಂಚ್

ಹರಿ ಪ್ರಸಾದ್ ನಾಯಕರಾಗಿರುವ ಎಂ.ಆರ್.ಪಿ ಚಿತ್ರ ದ ಟ್ರೇಲರ್ ಲಾಂಚ್ ಸಮಾರಂಭದಲ್ಲಿ ಫ್ರೆಂಡ್ಸ್ ಚಿತ್ರತಂಡದ ಸ್ನೇಹಿತರೆಲ್ಲರು ಉಪಸ್ಥಿತರಿದ್ದರು.
ಫ್ರೆಂಡ್ಸ್ ತಂಡದ ಅಧ್ಯಕ್ಷ ಎಂದು ನಿರ್ಮಾಪಕ ಎಂ.ಡಿ ಶ್ರೀಧರ್ ಅವರಿಂದ ಕರೆಸಲ್ಪಟ್ಟ  ಶರಣ್ ಅವರು ಮಾತನಾಡುತ್ತಾ, ಸಿನಿಮಾ‌ಫೀಲ್ಡ್ ಗೆ ಬಂದಾಗ ಹೇಗಪ್ಪಾ ಇಲ್ಲಿ‌, ಎಲ್ಲರ ಜೊತೆ ಬೆರೆಯುವುದು ಎಂಬ ಭಯದಲ್ಲಿದ್ದ ನನಗೆ ಎರಡೇ ದಿನದಲ್ಲಿ ಆತ್ಮೀಯರಾಗಿದ್ದು ಎಂ.ಡಿ.ಶ್ರೀಧರ್ ಅವರ ತಂಡ.  ಹಾಗೂ ಈಗ ಈ ತಂಡಕ್ಕೆ ಎಂ ಆರ್ ಪಿ ಮೂಲಕ ಮತ್ತೊಮ್ಮೆ ಗೆಲುವು ಸಿಗಲಿ ಎಂದು ಹಾರೈಸಿದರು.
ನಿರ್ದೇಶಕ ಬಾಹುಬಲಿ ಅವರು ‘ ದಪ್ಪ ದೇಹದ ಯುವಕ ಕತೆಯೇ ಈ ಚಿತ್ರ. ನನ್ನದು ಕರಗದ ಬಾಡಿ ಎಂದು ಅರಿವಾದಾಗ, ತಾನು ಇದ್ದ ಹಾಗೆ ಇದ್ದು ಎಂಜಾಯ್ ಮಾಡುವ ಯುವಕನ ಕತೆಯೇ ಇದು ‘ಎಂದರು. ಕತೆ, ಚಿತ್ರಕತೆ ನಿರ್ದೇಶಕರೇ ಬರೆದಿದ್ದಾರೆ. ನಟ ಜಗ್ಗೇಶ್ ಅವರು ಸಿನಿಮಾದ ಒಂದಷ್ಟು ಸೀನ್ ಗಳನ್ನು ನೋಡಿ ಮೆಚ್ಚಿದ್ದು, ನಮಗೆ ಖುಷಿ ತಂದಿದೆ ಎಂದರು. ಸಾಹಸ ಧೃಶ್ಯ ಮತ್ತು ಡಬ್ಬಿಂಗ್ ನಾನೇ ಮಾಡಿದ್ದೀನಿ ಎಂದು ನಾಯಕ ಹರಿಪ್ರಸಾದ್ ಹೇಳಿದರು.
ಚಿತ್ರದ ನಿರ್ಮಾಪಕ ಎಂ.ಡಿ.ಶ್ರೀಧರ್ ಮಾತನಾಡುತ್ತಾ, ‘ಫ್ರೆಂಡ್ಸ್’ ಚಿತ್ರ ತಂಡವನ್ನು ಈ ಸಮಾರಂಭದಲ್ಲಿ ಸೇರಿಸಲು ಪ್ರಯತ್ನ ಪಟ್ಟೆವು. ಆದರೆ ಆಗಲಿಲ್ಲ. ಮುಂದೊಂದು ದಿನ ಎಲ್ಲರನ್ನು ಒಟ್ಟಿಗೆ ಸೇರಿಸೋದಾಗಿ ಹೇಳಿದರು.
ಸಂಗೀತ ನಿರ್ದೇಶಕ ಹರ್ಷವರ್ಧನ್ , ಸಿನಿಮಾದಲ್ಲಿ ಮೂರು ಹಾಡುಗಳಿವೆ, ಚುಟು ಚುಟು ಪದ್ಯ ಹಾಡಿದ ರವೀಂದ್ರ ಸೊರಗಾಂವಿ ಮತ್ತು ಸಂಚಿತ್ ಹೆಗ್ಡೆ ಹಾಡಿದ್ದು, ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ ಎಂದರು. ಇದು ನಮ್ಮದೇ ತಂಡ, ತುಂಬಾ ಆತ್ಮೀಯ ಭಾವ ಇದೆ ಎಂದು ಅತಿಥಿಯಾಗಿ ಆಗಮಿಸಿದ್ದ ದಿನಕರ್ ತೂಗುದೀಪ ಹೇಳಿದರು. ಮತ್ತೋರ್ವ ಅತಿಥಿ ಕವಿರಾಜ್ ಕೂಡ ಉಪಸ್ಥಿತರಿದ್ದರು.
ಆನಂದ್ ಆಡಿಯೋ ಶ್ಯಾಮ್ ಅವರು ಫ್ರೆಂಡ್ಸ್ ಹೇಗೆ ಯಶಸ್ಸು ಪಡೆಯಿತೋ ಹಾಗೆ ಇದು ಕೂಡ ಯಶಸ್ವಿ ಯಾಗಲಿ ಎಂದರು. ಮೊದಲಬಾರಿ ವಿಲನ್ ಪಾತ್ರದಿಂದ ಕಾಮಿಡಿ ಪಾತ್ರ ಹಾಗೂ ಈ ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರ ಮಾಡಿದ್ದೀನಿ ಎಂದು ನಟ ಬಲರಾಜ್ ವಾಡಿಯವರು ಹೇಳಿದರು. ಎಂ.ಡಿ.ಶ್ರೀಧರ್ ಅವರೊಂದಿಗೆ ಛಾಯಾಗ್ರಾಹಕ ಎಂ.ವಿ.ಕೃಷ್ಣಕುಮಾರ್, ಮೋಹನ್ ಕುಮಾರ್ ಎನ್.ಜಿ,ರಂಗಸ್ವಾಮಿ ಕೆ.ಆರ್ ಜೊತೆ ಸೇರಿ ಚಿತ್ರ ನಿರ್ಮಿಸಿದ್ದಾರೆ.
Be the first to comment

Leave a Reply

Your email address will not be published. Required fields are marked *

Translate »
error: Content is protected !!