Friday Release: ರಕ್ತಾಕ್ಷ, ಕೆಂಡ, ರೂಪಾಂತರ, ಸೇರಿದಂತೆ ಇಂದು 6 ಕನ್ನಡ ಸಿನಿಮಾ ಬಿಡುಗಡೆ

ಚಂದನವನದ ತೆರೆಗಳಿಗೆ ಸಿನಿಮಾಗಳ ಹರಿವು ಹೆಚ್ಚಾಗಿದ್ದು, ಇಂದು  ಆರು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ರೂಪಾಂತರ:

ಮಿಥಿಲೇಷ್‌ ಎಡವಲತ್‌ ನಿರ್ದೇಶಿಸಿರುವ ಈ ಸಿನಿಮಾ ನಾಲ್ಕು ಕಥೆಗಳ ಗುಚ್ಛ.  ವ್ಯಕ್ತಿಗಳ ರೂಪಾಂತರಗೊಳ್ಳುವಿಕೆಯೇ ಸಿನಿಮಾದ ಕಥೆ. ಸಿನಿಮಾದಲ್ಲಿ ರಾಜ್ ಬಿ.ಶೆಟ್ಟಿ ನಟಿಸಿದ್ದು  ಸಂಭಾಷಣೆ ಹಾಗೂ ಹೆಚ್ಚುವರಿ ಚಿತ್ರಕಥೆ ಬರೆದಿದ್ದಾರೆ. ಸೋಮಶೇಖರ್ ಬೋಳೆಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರದ್ವಾಜ್‌ ಮತ್ತಿತರರು ತಾರಾಬಳಗದಲ್ಲಿದ್ದಾರೆ. ಮಿದುನ್‌ ಮುಕುಂದನ್‌ ಸಂಗೀತ, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಭುವನೇಶ್ ಮಣಿವಣ್ಣನ್ ಸಂಕಲನ ಚಿತ್ರಕ್ಕಿದೆ.

 

ಕುಬುಸ:

ರಘುರಾಮ ಚರಣ್ ನಿರ್ದೇಶನದ ಕುಬುಸ ಚಿತ್ರ ಕುಂ.ವೀರಭದ್ರಪ್ಪ ಅವರ ಕಥೆ ಆಧರಿಸಿದೆ. ವಿ. ಶೋಭಾ ಸಿನಿಮಾಸ್ ಬ್ಯಾನರ್‌ನಡಿ ವಿ. ಶೋಭಾ ಆದಿನಾರಾಯಣ  ಚಿತ್ರ  ನಿರ್ಮಿಸಿದ್ದಾರೆ. ರಘುರಾಮ ಚರಣ್ ಹೂವಿನಹಡಗಲಿ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ‘ರಾಮ ರಾಮ ರೇ’ ಖ್ಯಾತಿಯ ನಟರಾಜ್ ಎಸ್. ಭಟ್, ಮಹಾಲಕ್ಷ್ಮೀ. ಮಂಜು ಆರ್ಯ ಮೈಸೂರ್, ರಂಗಭೂಮಿ ಕಲಾವಿದೆ ಹನುಮಕ್ಕ, ಜೋಗತಿ ಮಂಜಮ್ಮ ಮುಂತಾದವರು ನಟಿಸಿದ್ದಾರೆ.

ರಕ್ತಾಕ್ಷ:

ಮಾಡೆಲಿಂಗ್ ಲೋಕದಲ್ಲಿ ಹೆಸರು ಮಾಡಿರುವ ರೋಹಿತ್‌  ನಾಯಕನಾಗಿ ನಟಿಸುವುದರ ಜೊತೆಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ಆಕ್ಷನ್, ಥ್ರಿಲ್ಲರ್ ಜಾನರ್‌  ‘ರಕ್ತಾಕ್ಷ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಾಸುದೇವ ಎಸ್. ಎನ್. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಪ್ರಮೋದ್‌ ಶೆಟ್ಟಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಡಾಸ್ ಸಂಗೀತ ಚಿತ್ರಕ್ಕಿದೆ. ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷ ನಾಯ್ಡು, ಗುರುದೇವ ನಾಗರಾಜ, ಪ್ರಭು ಮುಂತಾದವರು ತಾರಾಬಳಗದಲ್ಲಿದ್ದಾರೆ.

 

ಕೆಂಡ:

ಸಹದೇವ್ ಕೆಲವಡಿ ನಿರ್ದೇಶನದ ಈ ಚಿತ್ರದಲ್ಲಿ  ಯುವಕನೋರ್ವ ಪರಿಸ್ಥಿತಿಗಳ ಸುಳಿಗೆ ಸಿಕ್ಕಿ ಭೂಗತ ಜಗತ್ತಿನ ತೆಕ್ಕೆಗೆ ಬೀಳುವ ಕಥೆ ಇದೆ.  ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್‌ನಡಿ ರೂಪಾ ರಾವ್  ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಬಿ.ವಿ.ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್‌ ಮುಂತಾದವರು ನಟಿಸಿದ್ದಾರೆ.

ಫ್ಯಾಮಿಲಿ ಡ್ರಾಮಾ:

ಆಕರ್ಷ್‌ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಡಾರ್ಕ್ ಕಾಮಿಡಿ ಜಾನರ್‌ನಲ್ಲಿರುವ ಈ ಸಿನಿಮಾ ಮುಗ್ಧ ಕುಟುಂಬವೊಂದು ಕೊಲೆ ಮಾಡಿ ಸಂಕಷ್ಟಕ್ಕೆ ಸಿಲುಕುವ ಕಥೆ ಹೊತ್ತಿದೆ.

ಸಿನಿಮಾದಲ್ಲಿ ಅಭಯ್, ಅನನ್ಯಾ ಅಮರ್, ಸಿಂಧು ಶ್ರೀನಿವಾಸಮೂರ್ತಿ, ರೇಖಾ, ಪೂರ್ಣಚಂದ್ರ ಮೈಸೂರು ಸೇರಿದಂತೆ ಅನೇಕರು ನಟಿಸಿದ್ದಾರೆ. ಡಬ್ಬುಗುಡಿ ಮುರಳಿಕೃಷ್ಣ ಅವರು  ಡಿಎಂಕೆ ಎಂಟರ್‌ಟೈನ್ಮೆಂಟ್‌ ಮೂಲಕ ಬಂಡವಾಳ ಹೂಡಿದ್ದಾರೆ.

ಸಾಂಕೇತ್‌:

ಜ್ಯೋತ್ಸಾ ಕೆ.ರಾಜ್‌ ನಿರ್ದೇಶನದ  ಸಿನಿಮಾದಲ್ಲಿ ಚೈತ್ರಾ ಶೆಟ್ಟಿ, ವಿಕ್ಕಿ ರಾವ್‌ ಮುಖ್ಯಭೂಮಿಕೆಯಲ್ಲಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!