ಈ ವಾರ ತೆರೆಗೆ ಬರಲಿದೆ ‘ಮತ್ತೆ ಉದ್ಭವ’

“ಮೂವತ್ತು ವರ್ಷಗಳಿಂದ ನಾನು ಎಲ್ಲೇ ಹೋಗಲಿ “ಉದ್ಭವ” ಚಿತ್ರದ ಎರಡನೇ ಭಾಗ ಯಾವಾಗ ಮಾಡುತ್ತೀರಾ” ಎಂದು ಕೇಳ್ತಾ ಇದ್ರು. ಹಾಗಾಗಿ ಅಂತದೊಂದು ಪ್ರಯತ್ನ ಮಾಡಿದ್ದೇನೆ. ಜನ ಬಂದು ಸಿನಿಮಾ ನೋಡಬೇಕು ಅಷ್ಟೇ” ಎಂದು ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ ಹೇಳಿದರು. ಅವರು ‘ಮತ್ತೆ ಉದ್ಭವ’ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ‌ ಮಾತನಾಡುತ್ತಿದ್ದರು.

“ಈ ಚಿತ್ರಕ್ಕೆ ವಿ.‌ಮನೋಹರ್ ಅವರ ಸಂಗೀತವಿದೆ. ಈ ಚಿತ್ರದ ನಾಯಕ ಪ್ರಮೋದ್. ಈ ಹಿಂದೆ ಪ್ರೀಮಿಯರ್ ಪದ್ಮಿನಿ, ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದಲ್ಲಿ ನಟಿಸಿದ ನಟ. ನಾಯಕಿ‌ ಮಿಲನಾ ನಾಗರಾಜ್. ಎಲ್ಲಾ ಅಂಶಗಳನ್ನು ಹೊಂದಿರುವಂತಹ ಒಳ್ಳೆ ಸಿನಿಮಾ” ಎಂದು ನಿರ್ದೇಶಕರು ಹೇಳಿದರು.

“ಕತೆಯಲ್ಲಿ ಟ್ವಿಸ್ಟ್ ಇದೆ. ಹಾಸ್ಯ ಪಾತ್ರವಿದೆಯೇನೋ ಅಂತ ಚಿತ್ರ ನಿರಾಕರಿಸಬೇಕೂಂತ ಇದ್ದೆ. ಕಾಮಿಡಿ ಇದೆ ಎನ್ನುವ ಕಾರಣಕ್ಕೆ ಚಿತ್ರ ಒಪ್ಪದೇ ಹೋಗಿದ್ದರೆ ಒಂದು ಒಳ್ಳೆ ಚಿತ್ರ ಕಳ್ಕೊತ್ತಾ ಇದ್ದೆ. ಯಾಕೆಂದರೆ ಇದು ಎಲ್ಲಾ ರೀತಿಯ ಅಂಶಗಳನ್ನು ಒಳಗೊಂಡ ಸಿನಿಮಾ. ಆ್ಯಕ್ಷನ್ ದೃಶ್ಯಗಳನ್ನು ಥ್ರಿಲ್ಲರ್ ಮಂಜು ಮಾಡಿದ್ದಾರೆ. ಬಿಲೀವ್ ಇನ್ ಗಾಡ್ ಬಟ್ ಡೋಂಟ್ ಡಿಪೆಂಡ್ ಇನ್ ಗಾಡ್ ಇದು ಚಿತ್ರದ ಸಂದೇಶ” ಎಂದರು ನಾಯಕ ನಟ ಪ್ರಮೋದ್.

ತಾವು ರಾಜಕಾರಣಿ ಹಾಗೂ ಸಿನಿಮಾನಟಿ ಪಾತ್ರ ಮಾಡಿರುವುದಾಗಿ ನಾಯಕಿ ಮಿಲನಾ ನಾಗರಾಜ್ ತಿಳಿಸಿದರು. ಸಿನಿಮಾ ಇದೇ ಶುಕ್ರವಾರ 7 ರಂದು 160 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನಿರ್ಮಾಪಕ ನಿತ್ಯಾನಂದ ಭಟ್, ಸಹ ನಿರ್ಮಾಪಕ ಗುರುಪ್ರಸಾದ್ ಮುದ್ರಾಡಿ ಮೊದಲಾದವರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

This Article Has 2 Comments
  1. Pingback: continuous delivery consulting

  2. Pingback: dumps shop

Leave a Reply

Your email address will not be published. Required fields are marked *

Translate »
error: Content is protected !!