ಮಾ.4ಕ್ಕೆ “ಅಘೋರ” ಚಿತ್ರ ಬಿಡುಗಡೆ

ವಿಭಿನ್ನ ಶೈಲಿಯ ಚಿತ್ರಗಳನ್ನು ನೋಡಬಯಸುವ ಸಿನಿಪ್ರಿಯರಿಗಾಗಿ ಬೆಳ್ಳಿಪರದೆ ಮೇಲೆ ಬರಲು ಸಿದ್ಧವಾಗಿರುವ ಚಿತ್ರ “ಅಘೋರ”. ಮುಂದಿನ ತಿಂಗಳು ಮಾರ್ಚ್ 04ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಮೈ ಜುಮ್ಮೆನಿಸುವಂತ ದೃಶ್ಯಗಳನ್ನು ಅನಾವರಣ ಮಾಡಲು ಬರುತ್ತಿದ್ದೇವೆ ಎನ್ನುತ್ತಿದೆ “ಅಘೋರ” ಚಿತ್ರತಂಡ. ಕೆ.ಆರ್‌.ಜಿ ಫಿಲಂಸ್ ಮೂಲಕ ಬಿಡುಗಡೆಯಾಗುತ್ತಿರುವ ಈ ಚಿತ್ರವು 35ಕ್ಕೂ ಹೆಚ್ಚು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಮೆಚ್ಚುಗೆಯೊoದಿಗೆ ಅವಾರ್ಡ್ ಪಡೆದುಕೊಂಡಿದೆ.

ಮನುಷ್ಯನಿಗೆ ಸಾವು ಹೇಗೆ ಬರುತ್ತೆ, ಆದು ಬರೋದಕ್ಕೂ ಮುಂಚೆ ಏನೇನೆಲ್ಲ ಮುನ್ಸೂಚನೆ ಕೊಡುತ್ತೆ, ಈ ಹುಟ್ಟು ಸಾವುಗಳ ಅಂತರದಲ್ಲಿ ಏನೇನು ನಡೆಯಬಹುದು, ಪ್ರಕೃತಿಗೂ ಸಾವಿಗೂ ನಡುವೆ ಇರುವ ಸಂಬಂಧವೇನು, ಮಾನವ ತನ್ನ ಸಾವಿನ ನಂತರ ಮತ್ತೊಂದು ಜನ್ಮ ಪಡೆಯುವ ಅಂತರದಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಭೂಮಿ, ಆಕಾಶ, ನೀರು, ಗಾಳಿ ಎನ್ನುವ ಪಂಚಭೂತಗಳ ಮೂಲಕ ಹೇಳಲಾಗಿದೆಯಂತೆ.

ಯುವ ನಿರ್ದೇಶಕ ಪ್ರಮೋದ್ ರಾಜ್ ಸಾರಥ್ಯದಲ್ಲಿ ಸಿದ್ಧವಾಗಿರುವ ಈ ಚಿತ್ರವನ್ನು ಪುನೀತ್ ಗೌಡ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹಾರರ್ ಅಂಶವು ಒಳಗೊಂಡಿರುವ ಈ ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಗೀತವನ್ನು ಡಾ. ವಿ. ನಾಗೇಂದ್ರ ಪ್ರಸಾದ್ ನಿರ್ವಹಿಸಿದ್ದು, ಹಿನ್ನೆಲೆ ಸಂಗೀತವನ್ನ ಮುರಳೀಧರನ್ ನೀಡಿದ್ದಾರೆ.
ಶರತ್.ವಿ. ಕುಮಾರ್ ಛಾಯಾಗ್ರಹಣ ಮಾಡಿದ್ದು, ಸಂಕಲನ ವನ್ನು ವೆಂಕಟೇಶ್ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಅವರು ಮೊದಲ ಬಾರಿಗೆ ಅಘೋರಿಯ ಪಾತ್ರ ಮಾಡಿದ್ದಾರ. ಉಳಿದ ಪಾತ್ರದಲ್ಲಿ ಅಶೋಕ , ರಚನಾ ದಶರಥ್, ದ್ರವ್ಯ ಶೆಟ್ಟಿ ಸೇರಿದಂತೆ ಹಲವು ಯುವ ಪ್ರತಿಭೆಗಳು ಅಭಿನಯಿಸಿದ್ದಾರೆ. ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ “ಅಘೋರ” ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!