‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಪಕರಿಂದ ಮೋಸ

ಸೂಪರ್ ಹಿಟ್ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಪಕರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಕಷ್ಟ ಎದುರಿಸಿದ್ದಾರೆ.

ಸಿನಿಮಾದ ನಿರ್ಮಾಪಕರಾದ ಶಾನ್ ಆಯಂಥೋನಿ, ಬಾಬು ಶಾಹಿರ್​ಗೆ ಕೊಚ್ಚಿಯಲ್ಲಿರುವ ಇವರ ಕಚೇರಿಗೆ ನೋಟಿಸ್ ನೀಡಲಾಗಿದೆ. ಇವರು ಶೀಘ್ರವೇ ‘ಇಡಿ’ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕಿದೆ. ಈಗ ಜಾರಿ ನಿರ್ದೇಶನಾಲಯದ ನೋಟಿಸ್​ಗೆ ನಿರ್ಮಾಪಕರು ಯಾವ ರೀತಿ ಉತ್ತರಿಸುತ್ತಾರೆ ನೋಡಬೇಕಿದೆ.

ಈ ಚಿತ್ರಕ್ಕೆ ಸಿರಾಜ್ ಎಂಬ ವ್ಯಕ್ತಿ 7 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಸಿನಿಮಾದಿಂದ ಬಂದ  ಲಾಭದಲ್ಲಿ ಶೇ. 40ರಷ್ಟು ಲಾಭವನ್ನು ಇವರಿಗೆ ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಹೂಡಿಕೆದಾರ ಸಿರಾಜ್​ಗೆ ಈ ಮೊತ್ತ ಸಿಕ್ಕಿಲ್ಲ. ಅವರಿಗೆ ಕೇವಲ 50 ಲಕ್ಷ ರೂಪಾಯಿ ಮಾತ್ರ ಸಿಕ್ಕಿದೆ ಎನ್ನಲಾಗಿದೆ. ಈ ಚಿತ್ರ 250 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಕಮರ್ಷಿಯಲ್ ಕೋರ್ಟ್​ಗೆ ಸಿರಾಜ್ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.  ಬಳಿಕ ಅವರು ಮರಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ  ತಮಗೆ ಮೋಸ ಆಗಿದೆ ಎಂದು ಅವರು ಹೇಳಿದ್ದರು.

ಎರ್ನಾಕುಲಂನ ಮರಾಡು ಪೊಲೀಸರು ಕೇರಳ ಹೈಕೋರ್ಟ್​ಗೆ ವರದಿ ಸಲ್ಲಿಕೆ ಮಾಡಿದ್ದರು. ಆಗ ‘ಮಂಜುಮ್ಮೇಲ್ ಬಾಯ್ಸ್’ ತಂಡದವರು ಹಗರಣ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ಮೇ ತಿಂಗಳಲ್ಲಿ ಈ ಸಿನಿಮಾ ತಂಡಕ್ಕೆ ಸಂಕಷ್ಟ ಎದುರಾಗಿತ್ತು. ‘ಗುಣ’ ಚಿತ್ರದ ಗೀತೆ ಬಳಸಿದ್ದಕ್ಕೆ ಇಳಯರಾಜ ಅವರು ತಂಡದ ಮೇಲೆ ಕೇಸ್ ಹಾಕಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!