ಮಗಳ ಆರತಕ್ಷತೆ ಸಮಾರಂಭಕ್ಕೆ ಮುಖ್ಯಮಂತ್ರಿಗೆ ಆಹ್ವಾನಿಸಿದ‌ ರಮೇಶ್ ದಂಪತಿ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಟ ರಮೇಶ್ ಅರವಿಂದ್, ತಮ್ಮ ಪುತ್ರಿಯ ಆರತಕ್ಷತೆ ‌ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.

ಪತ್ನಿ ಅರ್ಚನಾ ಅವರೊಂದಿಗೆ ಸೋಮವಾರ ಬೆಂಗಳೂರಿನ ಸಿಎಂ ನಿವಾಸಕ್ಕೆ ತೆರಳಿದ ನಟ ರಮೇಶ್ ಅರವಿಂದ್, ತಮ್ಮ ಮಗಳು ನಿಹಾರಿಕ ಹಾಗೂ ಅಕ್ಷಯ್ ಅವರ ಮದುವೆ ಆರತಕ್ಷತೆ ಸಮಾರಂಭಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದಾರೆ. ಆರತಕ್ಷತೆ ಸಮಾರಂಭ ಜನವರಿ 2ನೇ ವಾರದಲ್ಲಿ ನಡೆಯಲಿದೆ ಎನ್ನಲಾಗಿದೆ.

ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕ ಹಾಗೂ ಅಕ್ಷಯ್ ಅವರ ವಿವಾಹ ಡಿಸೆಂಬರ್ 28ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!