ಸಹನಟಿ ಮೇಲೆ ಅತ್ಯಾಚಾರ ಮಾಡಿರುವ ಆರೋಪಿ ಮಡೆನೂರು ಮನುಗೆ ಸಂಕಷ್ಟ ಎದುರುರಾಗಿದ್ದು, ಮನು ವನ್ನು ದೂರ ಇಡಲು ಚಿತ್ರರಂಗ ಚಿಂತಿಸಿದೆ.
ಮಡೆನೂರು ಮನು ಮಾತನಾಡಿರುವ ಆಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಈ ಆಡಿಯೋದಲ್ಲಿ ದರ್ಶನ್, ಶಿವಣ್ಣ ಹಾಗೂ ಧ್ರುವ ಅವರನ್ನು ನಿಂದಿಸಲಾಗಿದೆ. ಮೇಲ್ನೋಟಕ್ಕೆ ಆಡಿಯೋದಲ್ಲಿರುವ ಧ್ವನಿ ಮನುದು ಎಂಬು ಸ್ಪಷ್ಟವಾಗಿದೆ. ಮನುವನ್ನು ಚಿತ್ರರಂಗದಿಂದ ದೂರ ಇಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಜ್ಜಾಗಿದೆ.
ಮಡೆನೂರು ಮನು ಮಾತನಾಡಿದ್ದಾರೆ ಎನ್ನಲಾದ ವೈರಲ್ ಆಡಿಯೋದಲ್ಲಿ, ‘ಶಿವಣ್ಣ ಇನ್ನೊಂದು ಆರು ವರ್ಷ ಬದುಕುತ್ತಾನೆ, ದರ್ಶನ್ ಈಗಾಗಲೇ ಸತ್ತೇ ಹೋಗಿದ್ದಾನೆ. ಧ್ರುವ ಸರ್ಜಾ ಇನ್ನು ಎಂಟು ವರ್ಷ ಕ್ರೇಜ್ ಇದ್ದರೆ ಹೆಚ್ಚು. ಈ ಮೂವರ ನಡುವೆ ಕಾಂಪಿಟೇಶನ್ ಕೊಡೋಕೆ ನಿಂತಿರುವ ಗಂಡುಗಲಿ ಕಣ್ರಿ ನಾನು’ ಎಂದು ಅಹಂಕಾರದ ಮಾತುಗಳನ್ನು ಮಡೆನೂರು ಮನು ಆಡಿದ್ದಾನೆ. ಇದು ಶಿವಣ್ಣ, ಧ್ರುವ ಹಾಗೂ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ.
ನಾಳೆ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದೆ. ಬುಧವಾರ ರಾಜ್ ಕುಮಾರ್ ಅಭಿಮಾನಿ ಎನ್ ಆರ್ ರಮೇಶ್ ಫಿಲ್ಮ್ ಚೇಂಬರ್ ಗೆ ದೂರು ನೀಡಲಿದ್ದಾರೆ. 100ಕ್ಕೂ ಹೆಚ್ಚು ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಲಿ ಎನ್ ಆರ್ ರಮೇಶ್ ನಿರ್ಧಾರ ಮಾಡಿದ್ದಾರೆ.
—

Be the first to comment