ಸೆಟ್ಟೇರಿತು ಅದ್ಧೂರಿ ಬಜೆಟ್​ನ ರಾಜ ವೀರ ಮದಕರಿ ನಾಯಕ…

ಕುರುಕ್ಷೇತ್ರ ಚಿತ್ರದ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಐತಿಹಾಸಿಕ ಚಿತ್ರವಾದ ರಾಜ ವೀರ ಮದಕರಿ ನಾಯಕ ಚಿತ್ರದಲ್ಲಿ ನಟಿಸುತ್ತಿದ್ದು,ಇಂದು ಬೆಳ್ಳಂಬೆಳಗ್ಗೆ ಚಿತ್ರದ ಮುಹೂರ್ತ ನೇರವೇರಿದೆ.

ಚಿತ್ರತಂಡ ನಗರದ ಗವಿಗಂಗಾಧರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಶೂಟಿಂಗ್​ಗೆ ಅಣಿಯಾಗಿದೆ. ಹೊಗೇನಕಲ್​ನಲ್ಲಿ ಮದಕರಿನಾಯಕನಿಗಾಗಿ ಬಹುದೊಡ್ಡ ಸೆಟ್ ಹಾಕಲಾಗಿದೆ. ಅದ್ಧೂರಿ ಬಜೆಟ್​ ಸಿನಿಮಾ ಇದಾಗಿದ್ದು, ಈ ಚಿತ್ರವನ್ನು ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡ್ತಿದ್ದಾರೆ. ಇನ್ನು,ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ.

ಸಿನಿಮಾ‌ ಮುಹೂರ್ತ ಕಾರ್ಯಕ್ರಮದಲ್ಲಿ ನಟ ದರ್ಶನ್ ,ಹಿರಿಯ‌ ನಟ ದೊಡ್ಡಣ್ಣ ,ನಿರ್ಮಾಪಕ ರಾಕ್​ಲೈನ್ ವೆಂಕಟೇಶ್,ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು,ಸಂಸದೆ ಸುಮಲತಾ ಅಂಬರೀಶ್ ಮುನಿರತ್ನ ಭಾಗವಹಿಸಿದ್ದರು.

ಚಿತ್ರದ ಮುಹೂರ್ತ ನೇರವೇರಿದಕ್ಕೆ ಸಂತಸ ವ್ಯಕ್ತಪಡಿಸಿದ ದರ್ಶನ್, ರಾಜ ವೀರ ಮದಕರಿ ನಾಯಕ ಚಿತ್ರದ ಮುಹೂರ್ತಕ್ಕೆ ಸುಮಲತಾ ಅಮ್ಮ ಚಾಲನೆ ಕೊಟ್ಟಿದ್ದಾರೆ. ಎಲ್ಲಾ ಹಿರಿಯರು ಈ ಚಿತ್ರದಲ್ಲಿ ಸೇರಿದ್ದಾರೆ. ಅವರು ಕೂತ್ಕೊ ಅಂದ್ರೆ ಕುತ್ಕೊಬೇಕು ,ನಿಂತ್ಕೊ ಅಂದ್ರೆ ನಿಂತ್ಕೊಬೇಕು. ಎಲ್ಲರು ನನ್ನ ಸೀನಿಯರ್ಸ್. ಅವರೆಲ್ಲರು ನಮ್ಮ ತಂದೆ ಜೊತೆಗೆ ಕೆಲಸ ಮಾಡಿದ್ದಾರೆ. ಮದಕರಿನಾಯಕನ ಚಿತ್ರಕ್ಕಾಗಿ ದೊಡ್ಡ ಟೀಮ್ ಸೇರಿದ್ದೀವಿ. ಈ ಪಾತ್ರದಿಂದ ಚಿತ್ರ ಇನ್ನಷ್ಟು ಜನರಿಗೆ ಹತ್ತಿರವಾಗಲಿದೆ. ಅಲ್ಲದೆ, ರಾಜಮಾತೆ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸುತ್ತಾರೆ ಎಂದರು.

This Article Has 2 Comments
  1. Pingback: sex hormone-binding globulin serum

  2. Pingback: see these helpful hints

Leave a Reply

Your email address will not be published. Required fields are marked *

Translate »
error: Content is protected !!