‘ವರಮಹಾಲಕ್ಷ್ಮಿ ಹಬ್ಬಕ್ಕೆ ‘ಮುನಿರತ್ನ ಕುರುಕ್ಷೇತ್ರ’ ತೆರೆಗೆ

ರಾಜ್ಯಾದ್ಯಂತ ಬಹು ನಿರೀಕ್ಷೆಯಿಂದ ಕೂಡಿರುವಂತಹ ಚಿತ್ರ “ಮುನಿರತ್ನ ಕುರುಕ್ಷೇತ್ರ” ಆಗಸ್ಟ್ ೯ರಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಕರುನಾಡಿನ ಡಿ. ಬಾಸ್ , ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೦ನೇ ಚಿತ್ರವನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಕುಡಿದ್ದು , ರೆಬಲ್ ಸ್ಟಾರ್ ದಿ. ಅಂಬರೀಶ್ , ಅರ್ಜುನ್ ಸರ್ಜಾ , ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವಾರು ಖ್ಯಾತ ಕಲಾವಿದರು ಅಭಿನಯಿಸಿರುವ ಈ ಚಿತ್ರ ವಿಶ್ವದ ಮೊದಲ ಪೌರಾಣಿಕ ೩ಡಿ ಎಂದೇ ಹೇಳಬಹುದು.

ಕುರುಕ್ಷೇತ್ರ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದ್ದು ಎಲ್ಲೆಡೆ ಸಕ್ಕತ್ ಸದ್ದು ಮಾಡುತ್ತಿದೆ.ಮುನಿರತ್ನ ನಿರ್ಮಾಣದಲ್ಲಿ ಮೂಡಿಬರುತ್ತಿರುವ, ಬಹು ಕೋಟಿ ವೆಚ್ಚದ, ಬಹುತಾರಾಗಣದ ಪೌರಾಣಿಕ ೩ಡಿ ಮುನಿರತ್ನ ಕುರುಕ್ಷೇತ್ರ ಚಿತ್ರವನ್ನು ರಾಕಲೈನ್ ಪ್ರೊಡಕ್ಷನ್ಸ್ ನ ವೆಂಕಟೇಶ ರವರು ವಿಶ್ವದಾದ್ಯಂತ ಅದ್ದೂರಿಯಾಗಿ ಇದೇ ಆಗಸ್ಟ್ ೯ರಂದು ತೆರೆಗೆ ತರುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!