ಗೋಕುಲ್ ಎಂಟರ್ಟೈನರ್ ಬ್ಯಾನರ್ ಮೂಲಕ ಗೋವಿಂದ್ ರಾಜು ನಿರ್ಮಿಸುತ್ತಿರುವ ಈ ಚಿತ್ರವನ್ನು ವಿಜಯಾನಂದ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದು, ಒಂದೊಂದು ಹಾಡು ವಿಭಿನ್ನವಾಗಿ ಬಂದಿದ್ದು , ಸದ್ಯ ಬಿಡುಗಡೆಯಾಗಿರುವ ಎರಡನೇ ಲಿರಿಕಲ್ ವಿಡಿಯೋ ಹಾಡು ಎಲ್ಲರ ಗಮನ ಸೆಳೆಯುತ್ತಿದೆ.

ನಿರ್ದೇಶಕ ವಿಜಯಾನಂದ್ ರವರೇ ಈ ಹಾಡಿನ ಸಾಹಿತ್ಯವನ್ನು ರಚಿಸಿದ್ದಾರೆ.ಈ ಚಿತ್ರದ ಕಥಾಹಂದರದ ಪ್ರಕಾರ ಚಿತ್ರದ ಶೀರ್ಷಿಕೆ ಹೇಳುವಂತೆ ಇದು ಕೃಷ್ಷ ಹೆಸರಿನ ಟಾಕೀಸ್ ವೊಂದರಲ್ಲಿ‌ ನಡೆಯುವ ಕತೆಯಾಗಿದೆ. ಕೃಷ್ಣ ಅಜಯ್ ರಾವ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಸಿಂಧು ಲೋಕನಾಥ್, ಅಪೂರ್ವ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸದ್ಯ ಎಲ್ಲ ಅಂದುಕೊಂಡಂತೆ ನಡೆಯುತ್ತಿದ್ದು , ಚಿತ್ರವನ್ನ ಅತೀ ಶೀಘ್ರದಲ್ಲಿ ಬೆಳ್ಳಿಪರದೆ ಮೇಲೆ ತರಲು ತಂಡ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅದ್ದೂರಿ ಪ್ರಚಾರದ ಮೂಲಕ “ಕೃಷ್ಣ ಟಾಕೀಸ್” ತೆರೆಯ ಮೇಲೆ ರಾರಾಜಿಸಲಿದೆ.