Kranthi Movie Ravichandran : ಕ್ರಾಂತಿ ತಂಡ ಸೇರಿದ ರವಿಚಂದ್ರನ್

ನಿರೀಕ್ಷೆ ಹುಟ್ಟಿಸಿರುವ ಕ್ರಾಂತಿ ಚಿತ್ರತಂಡವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರಿಕೊಂಡಿದ್ದಾರೆ.

ಸೆಟ್‌ನಲ್ಲಿ ರವಿಚಂದ್ರನ್ ಮತ್ತು ದರ್ಶನ್ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೊ ವೈರಲ್ ಆಗಿದೆ. ವೈರಲ್ ಫೋಟೋದಲ್ಲಿ ನಟ ರವಿಚಂದ್ರನ್ ಪಂಚೆ, ಶರ್ಟು ತೊಟ್ಟು, ಕೊರಳಲ್ಲಿ ರುದ್ರಾಕ್ಷಿ ಧರಿಸಿದ್ದು, ಚಿತ್ರದಲ್ಲಿ ದರ್ಶನ್ ಅವರ ಅಪ್ಪ ಅಥವಾ ಅಣ್ಣನ ಪಾತ್ರದಲ್ಲಿ ರವಿಚಂದ್ರನ್ ಅಭಿನಯಿಸಿರಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ.

ಇತ್ತೀಚೆಗೆ ನಟಿ ಅಭಿರಾಮಿ ‘ಕ್ರಾಂತಿ’ ಚಿತ್ರದ ಸೆಟ್‌ನಲ್ಲಿ ಪ್ರತ್ಯಕ್ಷವಾಗಿದ್ದರು. ದರ್ಶನ್ ಜೊತೆಗಿನ ಫೋಟೋವನ್ನು ಅಭಿರಾಮಿ ಹಂಚಿಕೊಂಡಿದ್ದರು. ಅಭಿರಾಮಿ ‘ಕ್ರಾಂತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅವರು ಈ ಹಿಂದೆ ದರ್ಶನ್ ಜೊತೆಗೆ ಲಾಲಿ ಹಾಡು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಎರಡು ದಶಕಗಳ ಬಳಿಕ ಅಭಿರಾಮಿ, ದರ್ಶನ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಯಜಮಾನ’ ಚಿತ್ರದ ನಿರ್ಮಾಪಕಿ ಶೈಲಾಜ ನಾಗ್ ‘ಕ್ರಾಂತಿ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ದರ್ಶನ್ ಅವರ 55ನೇ ಸಿನಿಮಾ ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ರಾಬರ್ಟ್’ ದೊಡ್ಡ ಯಶಸ್ಸು ಗಳಿಸಿದ ಬಳಿಕ ದರ್ಶನ್ ‘ರಾಜವೀರ ಮದಕರಿ ನಾಯಕ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದರು. ಆದರೆ ಆ ಸಿನಿಮಾದ ಚಿತ್ರೀಕರಣ ನಿಂತಿದೆ. ‘ರಾಜವೀರ ಮದಕರಿ ನಾಯಕ’ ಸಿನಿಮಾವನ್ನು ಹರಾಜೇಂದ್ರ ಬಾಬು ನಿರ್ದೇಶನ ಮಾಡುತ್ತಿದ್ದು, ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈಗ ಕ್ರಾಂತಿ ಸಿನಿಮಾದಲ್ಲಿ ದರ್ಶನ್ ತೊಡಗಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!