ಪ್ರಸಾರವಾಗಲಿಲ್ಲ ʼಕರ್ಣʼ ಸೀರಿಯಲ್: ಕಾರಣ?

‘ಕನ್ನಡತಿ’   ಖ್ಯಾತಿಯ ಕಿರಣ್‌ ರಾಜ್‌, ಬಿಗ್‌ ಖ್ಯಾತಿಯ ಭವ್ಯಾ ಗೌಡ, ನಮ್ರತಾ ಗೌಡ ಅಭಿನಯದ ‘ಕರ್ಣ’ ಧಾರಾವಾಹಿ  ಪ್ರಸಾರ ಅನಿರ್ದಿಷ್ಟಾವಧಿ ಮುಂದೂಡಲಾಗಿದೆ.

ಶ್ರುತಿ ನಾಯ್ಡು ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಕರ್ಣ ಸೀರಿಯಲ್‌ ನಲ್ಲಿ ಕಿರಣ್​ ರಾಜ್​ಗೆ ನಾಯಕಿಯರಾಗಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಅಭಿನಯಿಸುತ್ತಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ​ ಪ್ರೋಮೋಗಳಿಗೆ ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. ನಿನ್ನೆ ತೆರೆಕಾಣಬೇಕಿದ್ದ ಧಾರಾವಾಹಿ ಮೂಂದೂಡಲು ಕಾರಣ ಭವ್ಯಾ ಗೌಡ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ.

ಭವ್ಯಾ ಗೌಡ ‘ಕರ್ಣ’ ಸೀರಿಯಲ್‌ ಮುನ್ನ ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದರು.  ಬಿಗ್‌ ಮನೆಯಲ್ಲಿದ್ದ ಭವ್ಯಾ ಆ ಬಳಿಕ ‘ಬಾಯ್ಸ್ ವರ್ಸಸ್ ಗಲ್ಸ್೯’ ಎಂಬ ಕಾರ್ಯಕ್ರಮದಲ್ಲಿ ಭಾಗವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಆಗಲಿಲ್ಲ.  ಒಂದು ವಾಹಿನಿ ಜೊತೆ ಗುರುತಿಸಿಕೊಂಡವರು ಕೆಲ ಒಪ್ಪಂದಗಳನ್ನು ‌ಮಾಡಿಕೊಂಡಿರುತ್ತಾರೆ. ಆ ಒಪ್ಪಂದ ಪೂರ್ಣಗೊಳ್ಳುವರೆಗೆ ಬೇರೆ ವಾಹಿನಿ ಕಡೆ ಇವರು ಮುಖ ಹಾಕುವಂತೆ ಇಲ್ಲ. ಈ ಒಪ್ಪಂದವನ್ನು ಭವ್ಯಾ ಗೌಡ ಮುರಿದಿದ್ದಾರೆ ಎನ್ನುವುದು ಸದ್ಯಕ್ಕೆ ಕೇಳಿ ಬರುತ್ತಿದೆ.

ಈ ಹಿನ್ನೆಲೆ ವಾಹಿನಿಯವರು ಧಾರಾವಾಹಿವಿರುದ್ದ ತಡೆಯಾಜ್ಞೆ ತಂದಿದ್ದಾರೆ.  ಹೀಗಾಗಿ  ಕರ್ಣನ ಮೊದಲ ದಿನದ ಆಟಕ್ಕೆ ಬ್ರೇಕ್ ಹಾಕಲಾಗಿದೆ.

‘ಮೊದಲ ಎಪಿಸೋಡ್​ ಯಾವಾಗ ಲಾಂಚ್ ಆಗುತ್ತೆ? ವೀಕ್ಷಕರ ರೆಸ್ಪಾನ್ಸ್​ ಹೇಗಿರುತ್ತೆ ಎಂದು ಕಾಯುತ್ತಿದ್ದೇವು.  ಎರಡು ವರ್ಷಗಳ ನಂತರ ಬರುತ್ತಿರುವ ಬಗ್ಗೆ ಕಾತುರತೆ ಇತ್ತು.  ನನಗೆ ಗೊತ್ತಿರುವ ಪ್ರಕಾರ ಕಾನೂನು ಸಮಸ್ಯೆ ಏನೋ ಆಗಿದೆ. ಆದಷ್ಟು ಬೇಗ ನಾವು ನಿಮ್ಮ ಮುಂದೆ ಬರುತ್ತೇವೆ. ತಡ ಆಗಬಹುದು. ಆದರೆ ಖಂಡಿತವಾಗಿ ಬಂದೇ ಬರುತ್ತೇವೆ. ಧಾರಾವಾಹಿ ಲಾಂಚ್ ಆಗದಿದ್ದಕ್ಕೆ ಕ್ಷಮೆ ಇರಲಿ.  ಪ್ರತಿಯೊಂದು ನಮ್ಮ ಕೈಯಲ್ಲಿ ಇರಲ್ಲ. ಕರ್ಣ ಧಾರಾವಾಹಿಗೆ ಕೋಟ್ಯಂತರ ರೂಪಾಯಿ ನಿರ್ಮಾಪಕರು ಹಾಕಿದ್ದಾರೆ. ಕಲಾವಿದರು, ಟೆಕ್ನಿಷಿಯನ್ಸ್ ಸಾಕಷ್ಟು ಶ್ರಮ ಹಾಕಿದ್ದಾರೆ. ಈ ಎಲ್ಲರ ಶ್ರಮಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ’ ಎಂದು ಕಿರಣ್ ರಾಜ್ ಭರವಸೆ ವ್ಯಕ್ತಪಡಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!