ಕಾಂತಾರಾಕ್ಕೆ ವೀರೇಂದ್ರ ಹೆಗ್ಗಡೆ ಮೆಚ್ಚುಗೆ

ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕುಟುಂಬ ಸಮೇತ ಕಾಂತಾರ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸಿನಿಮಾದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ, ನಟ ಮತ್ತು ಬರಹಗಾರ ಶಾನಿಲ್ ಗುರು ಸೇರಿ 15ಕ್ಕೂ ಅಧಿಕ ಕಲಾವಿದರು ಹಾಜರಿದ್ದರು.

ಸಿನಿಮಾ ನೋಡಿ ಮಾತನಾಡಿದ ಡಾ.ಡಿ.ವೀರೇಂದ್ರ ‌ಹೆಗ್ಗಡೆ, ಸಿನಿಮಾ ನೋಡಿ ಬಹಳ ದಿನವಾಗಿತ್ತು. ಒಂದು ವಿಭಿನ್ನ ಸಿನಿಮಾ ನೋಡಿದೆ. ರಾಜ್ಯದ ಒಂದು ಭಾಗದ ‌ಅನುಭವಗಳು, ನಂಬಿಕೆ, ನಡವಳಿಕೆಗಳು. ದೈವಾರಾಧನೆಯ ಸೂಕ್ಷ್ಮತೆಗಳನ್ನ ಬಹಳ ಚೆನ್ನಾಗಿ ರಿಷಬ್ ತೋರಿಸಿದ್ದಾರೆ. ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರ ನೋಡಿ ನಾನು ಇನ್ನೂ ಆ ಮೂಡ್‌ನಿಂದ ಹೊರಗೆ ಬಂದಿಲ್ಲ. ನಮ್ಮ ದೈವಗಳು ಅಧರ್ಮಕ್ಕೆ ಬೆಂಬಲ ಕೊಡುವುದಿಲ್ಲ ಎನ್ನುವುದು ಚಿತ್ರದ ಸಂದೇಶ. ನಮ್ಮ ಸಮಾಜದಲ್ಲಿ ಸ್ವಾರ್ಥಿಗಳು ಇರ್ತಾರೆ. ಭೂಮಿ, ಸಂಪತ್ತಿನ ಬಗ್ಗೆ ಆಸೆಯಿರುತ್ತದೆ. ದೈವಗಳು ಸತ್ಯ ಮತ್ತು ‌ಧರ್ಮ ಹೊರತು ಪಡಿಸಿ ಯಾವುದಕ್ಕೂ ಬೆಂಬಲ ಕೊಡುವುದಿಲ್ಲ ಎಂದು ಸಿನಿಮಾ ತೋರಿಸಿದೆ. ಇದು ಒಳ್ಳೆಯ ಸಂದೇಶ ಎಂದು ನನ್ನ ಅನಿಸಿಕೆ ಎಂದರು.

ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಈ ಚಿತ್ರ ಮಾಡುವ ಮೊದಲೇ ಧರ್ಮಸ್ಥಳಕ್ಕೆ ತೆರಳಿ ಡಾ.ಡಿ ವಿರೇಂದ್ರ ಹೆಗ್ಗಡೆಯವರ ಬಳಿ ಚಿತ್ರದ ಕುರಿತು ವಿವರಣೆ ನೀಡಿ ಆಶೀರ್ವಾದ ಪಡೆದಿದ್ದರು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!