kanthara ಕಾಂತಾರ ಮೆಚ್ಚಿ ಪತ್ರ ಬರೆದ ಕಮಲ್ ಹಾಸನ್

ಹಿರಿಯ ನಟ ಕಮಲ್ ಹಾಸನ್‌ ಅವರು ಕಾಂತಾರ ಯಶಸ್ಸಿನ ಕುರಿತು ರಿಷಬ್‌ ಶೆಟ್ಟಿ ಅವರಿಗೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಮಲ್ ಬರೆದಿರುವ ಫ್ರೇಮ್‌ನಲ್ಲಿರುವ ಪತ್ರದ ಫೋಟೊವನ್ನು ರಿಷಬ್‌ ಶೆಟ್ಟಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ʻʻಇಂಡಿಯಾದ ಲೆಜೆಂಡ್‌ ಕಮಲ್‌ ಹಾಸನ್‌ ಅವರಿಂದ ಸುಂದರವಾದ ಸಂದೇಶವನ್ನು ಸ್ವೀಕರಿಸುವುದರಲ್ಲಿ ಬಹಳಷ್ಟು ಅರ್ಥವಿದೆ. ಕಮಲ್ ಸರ್ ಅವರ ಈ ಸರ್ಪ್ರೈಸ್ ಗಿಫ್ಟ್ ನೋಡಿ ತುಂಬಾ ಬೆಚ್ಚಿ ಬಿದ್ದೆ ಮತ್ತು ಬೆರಗಾದೆ. ಈ ಅಮೂಲ್ಯ ಕೊಡುಗೆಗಾಗಿ ಧನ್ಯವಾದಗಳು ಸರ್’ ಎಂದು ರಿಷಬ್‌ ಶೆಟ್ಟಿ ಬರೆದುಕೊಂಡಿದ್ದಾರೆ.

ಕಮಲ್‌ ಹಾಸನ್‌ ಪತ್ರದಲ್ಲಿ ʻʻಕಾಂತಾರದಂತಹ ಚಲನಚಿತ್ರ ಮನಸ್ಸಿನಲ್ಲಿ ಉಳಿದು ಅರಳುತ್ತದೆ. ನಾನು ದೇವರಿಲ್ಲದ ಮನುಷ್ಯ. ಆದರೂ ಹೆಚ್ಚಿನವರಲ್ಲಿ ಒಬ್ಬರ ಅಗತ್ಯವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನಮ್ಮ ಹೆಚ್ಚಿನ ಪುರಾಣಗಳಲ್ಲಿ ಚಿತ್ರಿಸಿರುವ ದೇವರುಗಳಲ್ಲಿ ಸಹಾನುಭೂತಿಯ ಕೊರತೆಯಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ದ್ರಾವಿಡರಾದ ನಮ್ಮದು ಮಾತೃಪ್ರಧಾನ ಸಮಾಜ. ಅದು ನಿಮ್ಮ ಚಿತ್ರದ ಕೊನೆಯ ದೃಶ್ಯದಲ್ಲಿ ಕಂಡು ಬರುತ್ತದೆ. ಅಲ್ಲಿ ದೇವರು ತಂದೆಗಿಂತ ಹೆಚ್ಚಾಗಿ ತಾಯಿಯಂತೆ ವರ್ತಿಸುತ್ತಾರೆ’ ಎಂದಿದ್ದಾರೆ.

ʻʻನೀವು ಎಂಟಿ ವಾಸುದೇವನ್ ನಾಯರ್ ಅವರ ನಿರ್ಮಾಲ್ಯಂ ಚಲನಚಿತ್ರವನ್ನು ನೋಡಿರಲಿಕ್ಕಿಲ್ಲ. ನಿಮ್ಮ ಚಿತ್ರವು ಆ ಕ್ಲಾಸಿಕ್‌ನ ಛಾಯೆಯನ್ನು ಹೊಂದಿದೆ. ನಿಮ್ಮ ಸಿನಿಮೀಯ ಡಿಎನ್‌ಎ ನಿಮಗೆ ತಿಳಿದಿಲ್ಲದ ಅನೇಕ ಪೂರ್ವಜರನ್ನು ಹೊಂದಿದೆ. ಆದರೆ ನೀವು ಮಾತನಾಡುವ ಸಿನಿಮೀಯ ಭಾಷೆ ಅವರಿಂದ ಬಂದಿದೆ ಎಂಬುದನ್ನು ನೆನಪಿಡಿʼ ಎಂದು ಕಮಲ್ ಬರೆದಿದ್ದಾರೆ.

ಕಾಂತಾರ ಬಿಡುಗಡೆಯಾದ ಸಂದರ್ಭದಲ್ಲಿ ಕಮಲ್‌ ಹಾಸನ್‌ ಕಾಂತಾರ ಸಿನಿಮಾವನ್ನು ಮೆಚ್ಚಿ ಹೊಗಳಿದ್ದರು.

ಕಾಂತಾರ 2023ರ ಆಸ್ಕರ್‌ ನಾಮನಿರ್ದೇಶನಕ್ಕೆ ಅರ್ಹವಾಗಿರುವ ಚಲನಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಜನವರಿ 15ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಚಿತ್ರ ಪ್ರಸಾರವಾಗಲಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!