ಕಂಗನಾ ರಣಾವತ್

ಕಂಗನಾ ಹೊಸ ಸಿನಿಮಾ ಅನೌನ್ಸ್!

ಎಮರ್ಜೆನ್ಸಿ ಸಿನಿಮಾ ವಿವಾದದ ನಡುವೆ ಟಿ ಕಂಗನಾ ರಣಾವತ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.

“ಭಾರತ ಭಾಗ್ಯ ವಿಧಾತ”  ಚಿತ್ರದಲ್ಲಿ ನಟಿಸಲು  ಕಂಗನಾ ರಣಾವತ್​ ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ.  ಭಾರತ್ ಭಾಗ್ಯ ವಿಧಾತ ಸಿನಿಮಾವನ್ನು ಮನೋಜ್ ತಪಾಡಿಯಾ ನಿರ್ದೇಶಿಸಿದ್ದಾರೆ. ಬೈಟಾ ಅಶಿವಾಲ್ ಮತ್ತು ಆದಿ ಶರ್ಮಾ ನಿರ್ಮಿಸಲಿದ್ದಾರೆ.

”ನಿಜ ಜೀವನದ ಹೀರೋಯಿಸಂನ ಮ್ಯಾಜಿಕ್ ಅನ್ನು ದೊಡ್ಡ ಪರದೆಯ ಮೇಲೆ ಅನುಭವಿಸಿ! ಪ್ರತಿಭಾವಂತ ನಿರ್ಮಾಪಕ ಜೋಡಿಗಳಾದ ಬಬಿತಾ ಆಶಿವಾಲ್ ಮತ್ತು ಆದಿ ಶರ್ಮಾ ಮತ್ತು ನಿರ್ದೇಶಕ-ಬರಹಗಾರ ಮನೋಜ್ ತಪಾಡಿಯಾ ಅವರೊಂದಿಗೆ ಭಾರತ್ ಭಾಗ್ಯ ವಿಧಾತವನ್ನು ಘೋಷಿಸಲು ಖುಷಿಯಾಗ್ತಿದೆ” ಎಂದು ನಟಿ ಕಂಗನಾ ಪೋಸ್ಟ್ ಮಾಡಿದ್ದಾರೆ.

ಕಂಗನಾ ರಣಾವತ್

ಕಂಗನಾ ಅಭಿನಯದ ‘ಎಮರ್ಜೆನ್ಸಿ’  ಚಿತ್ರವನ್ನು ಸೆಪ್ಟೆಂಬರ್ 6 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಚಿತ್ರಕ್ಕೆ ಸಿಬಿಎಫ್‌ಸಿ ಯಿಂದ ಅನುಮತಿ ಸಿಗದ ಹಿನ್ನೆಲೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಎಮರ್ಜೆನ್ಸಿ ಸಿನಿಮಾ ಟ್ರೇಲರ್ ರಿಲೀಸ್ ಬಳಿಕ ಭಾರೀ ವಿವಾದ ಹುಟ್ಟುಹಾಕಿದೆ.

ಎಮರ್ಜೆನ್ಸಿಕಥೆಯು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅವರ ಜೀವನದ ಸುತ್ತ ಸುತ್ತುತ್ತದೆ. ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಅವರೇ ಚಿತ್ರ ನಿರ್ದೇಶನವನ್ನೂ ಮಾಡಿದ್ದಾರೆ.  ಶ್ರೇಯಸ್ ತಲ್ಪಾಡೆ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಜೈಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಂಡಿದ್ದಾರೆ. ಮಹಿಮಾ ಚೌಧರಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!