ಸ್ಟಾರ್ ಹೀರೋ ಜೊತೆಗೆ ಕಲ್ಯಾಡಿ ಸಹೋದರರಿಂದ ಸಿನಿಮಾ!!

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನು ರಂಜನ್ ಅಭಿನಯದ “ಪ್ರಾರಂಭ” ಚಿತ್ರ ಈಗ ಬಿಡುಗಡೆಯ ಹಂತದಲ್ಲಿದೆ. ಸಾಲು ಸಾಲಾಗಿ ಉತ್ತಮ ಚಿತ್ರಗಳನ್ನು ನೀಡುವ ನಿಟ್ಟಿನಲ್ಲಿ ಕಲ್ಯಾಡಿ ಸಹೋದರರು ಈಗ ಸಿದ್ಧರಾಗಿದ್ದಾರೆ.

ಈಗಾಗಲೇ ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಗದೀಶ್ ಕಲ್ಯಾಡಿ ಅವರು ನಿರ್ಮಿಸಿ ಮನು ಕಲ್ಯಾಡಿ ನಿರ್ದೇಶಿಸಿರುವ ಪ್ರಾರಂಭ ಚಿತ್ರ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಲಾಕ್ ಡೌನ್ ಸಡಿಲಗೊಂಡ ನಂತರ ಬೆಳ್ಳಿ ಪರದೆಯ ಮೇಲೆ ಈ ಚಿತ್ರ ಅಬ್ಬರಿಸಲಿದೆ.

“ಪ್ರಾರಂಭ” ದ ಮೂಲಕ ಚಿತ್ರರಂಗದಲ್ಲಿ ಶುಭಾರಂಭ ಮಾಡಲಿರುವ ನಿರ್ಮಾಪಕ‌ ಜಗದೀಶ್ ಕಲ್ಯಾಡಿ ಹಾಗೂ ನಿರ್ದೇಶಕ ಮನು ಕಲ್ಯಾಡಿ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಲಿರುವ ಎರಡನೆಯ ಪ್ರಾಜೆಕ್ಟ್ ಗೆ ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಅಭಿನಯಿಸಲಿದ್ದು , ಈಗಾಗಲೇ ಮಾತುಕತೆ ನಡೆಯುತ್ತಿದೆಯಂತೆ. ನಾಯಕಿ ಸೇರಿದಂತೆ ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ದೇಶಕ ಮನು ಕಲ್ಯಾಡಿ ತಿಳಿಸಿದ್ದಾರೆ.

ಲಾಕ್ ಡೌನ್ ಮುಗಿದ್ದು ಚಿತ್ರೀಕರಣಕ್ಕೆ ಅನುಮತಿ ದೊರಕಿದ ಕೂಡಲೆ ಈ ನೂತನ ಚಿತ್ರದ ಚಿತ್ರೀಕರಣ ಚಾಲನೆ ಪಡೆದುಕೊಳ್ಳಲಿದೆ. ನಿರ್ಮಾಪಕ ಜಗದೀಶ್ ಕಲ್ಯಾಡಿ ಕೂಡ ತಮ್ಮ ಮೊದಲ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದು , ಚಿತ್ರ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸದೊಂದಿಗೆ ಈಗ ಎರಡನೇ ಚಿತ್ರಕ್ಕೂ ಮುಂದಾಗಿದ್ದಾರೆ.

ಇವರೊಂದಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ನವೀನ್ ಚಿತ್ರದ ಆರಂಭದಿಂದ ಹಿಡಿದು ಪ್ರಚಾರ ಮಾಡುವುದರ ಜೊತೆಗೆ ಸಂಪೂರ್ಣ ಸಾಥ್ ತಂಡಕ್ಕೆ ನೀಡಿದ್ದಾರೆ. ಒಂದು ಉತ್ತಮ ಚಿತ್ರವಾಗಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು , ಬಹಳಷ್ಟು ಯುವ ಪಡೆಗಳ ಬಳಗ ಈ ತಂಡದಲ್ಲಿ ದುಡಿಯುತ್ತಿದ್ದಾರೆ.

This Article Has 2 Comments
  1. Pingback: Bowling Green Towing

  2. Pingback: sexy dolls for men animals

Leave a Reply

Your email address will not be published. Required fields are marked *

Translate »
error: Content is protected !!