Kabandha Movie : ಶೀಘ್ರದಲ್ಲೇ ‘ಕಬಂಧ’ ತೆರೆಗೆ

‘ಕುಂಜರ ಫಿಲಮ್ಸ್ ‘ಲಾಂಛನದಲ್ಲಿ ನಿರ್ಮಾಣಗೊಂಡಿರುವ “ಕಬಂಧ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಸತ್ಯನಾಥ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಕಬಂಧ’ ಸಿನಿಮಾದಲ್ಲಿ ಪ್ರಸಾದ್‌ ವಶಿಷ್ಠ, ಪ್ರಿಯಾಂಕ ಮಳಲಿ , ಕಿಶೋರ್‌ ಕುಮಾರ್‌, ಅವಿನಾಶ್‌, ನಿರ್ದೇಶಕ ಯೋಗರಾಜಭಟ್‌, ವಂದನ, ವಚನ, ಛಾಯಾಶ್ರೀ, ಪ್ರಶಾಂತ್‌ ಸಿದ್ಧಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಭಯಾನಕ ಅಪರಾಧ ಪ್ರಕರಣವೊಂದನ್ನು ಆಧಾರವಾಗಿಟ್ಟುಕೊಂಡು ಹಾರರ್‌ ಶೈಲಿಯಲ್ಲಿ “ಕಬಂಧ’ ಸಿನಿಮಾದ ಮುಖಾಂತರ ಹೇಳಲಾಗುತ್ತದೆ ಎಂದು ನಿರ್ದೇಶಕ ಸತ್ಯನಾಥ್ ಅವರು ಹೇಳಿದರು.

ಇತ್ತೀಚೆಗಷ್ಟೇ ಗೆಳೆತನ ಕುರಿತಾದ ಲಿರಿಕಲ್ ಹಾಡು  ಬಿಡುಗಡೆಯಾಯಿತು. ಕೆ ಕಲ್ಯಾಣ ಸಾಹಿತ್ಯ,  ಸಾಯಿ ತೇಜ ಸಂಗೀತದಲ್ಲಿ  ಮೂಡಿ ಬಂದಿರುವ ಈ ಹಾಡನ್ನು  ವಾಸುಕಿ ವೈಭವ ಹಾಡಿದ್ದಾರೆ.

“ಕಬಂಧ’ ಸಿನಿಮಾವನ್ನು  ತುಮಕೂರು, ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ಸಿನಿಮಾಕ್ಕೆ ವಿಷ್ಣುಪ್ರಸಾದ್‌ ಛಾಯಾಗ್ರಹಣವಿದ್ದು, ಸತ್ಯಜಿತ್‌ ಸಿದ್ದಕಾಂತ್‌ ಸಂಕಲನವಿದೆ. ರಘುತೋಮ ಏನ್ ಎಸ್ ಮತ್ತು ಶ್ರೇಯಸ್ ರಾವ್ ಸಂಗೀತ ಸಂಯೋಜನೆಯ ಹಾಡುಗಳಿಗೆ ಕೆ. ಕಲ್ಯಾಣ್‌ ಸಾಹಿತ್ಯವಿದೆ. ಹಾಡುಗಳು ಡಿ ಬೀಟ್ಸ್ ನಲ್ಲಿ ಬಿಡುಗಡೆ ಯಾಗಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!