ಸೆಟ್ಟೇರಿದ ರಂಗನಾಯಕ ಚಿತ್ರ

ನಿರ್ದೇಶಕ ಗುರುಪ್ರಸಾದ್, ನವರಸ ನಾಯಕ ಜಗ್ಗೇಶ್ ಕಾಂಬಿನೇಷನ್‌ನ ‘ರಂಗನಾಯಕ’ ಸಿನಿಮಾ ಸೆಟ್ಟೇರಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಜಗ್ಗೇಶ್ ಅವರು ಬಹಳ ವಿಶೇಷವಾದ ಗೆಟಪ್‌ನಲ್ಲಿ ರಂಗನಾಯಕ ಶೂಟಿಂಗ್ ಸೆಟ್‌ಗೆ ಎಂಟ್ರಿಯಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೋಟೋದಲ್ಲಿ ಕರ್ನಾಟಕದ ಬಾವುಟದ ಬಣ್ಣ ಹೋಲುವ ವಸ್ತ್ರ ತೊಟ್ಟು ಜಗ್ಗೇಶ್ ಸೆಟ್‌ಗೆ ಬಂದಿರುವುದು ಕಂಡು ಬಂದಿದೆ. ಜಗ್ಗೇಶ್ ಅವರನ್ನು ನಿರ್ದೇಶಕ ಗುರು ಪ್ರಸಾದ್ ಹಾಗೂ ನೃತ್ಯ ಸಂಯೋಜಕ ಇರ್ಮಾನ್ ಸರ್ದಾರಿಯಾ ಸ್ವಾಗತಿಸಿದ್ದಾರೆ.

ಸುಮಾರು 11 ವರ್ಷದ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಅವರು ಮಠ, ಎದ್ದೇಳು ಮಂಜುನಾಥ ಚಿತ್ರದ ನಂತರ ‘ರಂಗನಾಯಕ’ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಇದು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ವಿಖ್ಯಾತ್ ಪ್ರೊಡಕ್ಷನ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ ಗುರುಪ್ರಸಾದ್ ಅವರದ್ದು ಆಗಿದೆ.

ಕಳೆದ ವರ್ಷದ ಡಿಸೆಂಬರ್ ನಲ್ಲಿ ರಂಗನಾಯಕದ ಮುಹೂರ್ತ ನಡೆದಿತ್ತು. ಆದರೆ ಕೋವಿಡ್ ಕಾರಣದಿಂದ
ಚಿತ್ರ ನಿರ್ಮಾಣದ ಕೆಲಸಕ್ಕೆ ಹಿನ್ನಡೆ ಉಂಟಾಗಿತ್ತು. ಈಗ ತಾನೇ ಸೆಟ್ಟೇರಿರುವ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಲಭಿಸಬೇಕಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!