“ಹೇಳು ವಂದೇ ಮಾತರಂ” ಸಾಂಗ್ ರಿಲೀಸ್

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ದೇಶಭಕ್ತಿ ಕುರಿತಂತೆ ಹಾಡುಗಳು ಬಂದಿವೆ. ದೇಶಾಭಿಮಾನ ಹೆಚ್ಚಿಸುವ ಗೀತೆಗಳಿಗಂತೂ ಲೆಕ್ಕವಿಲ್ಲ. ಆ ಸಾಲಿಗೆ ಈಗ ಮತ್ತೊಂದು ದೇಶಾಭಿಮಾನದ ವಿಡಿಯೊ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿಯೇ ತಯಾರಾಗಿರುವ ಈ ಹಾಡಿಗೆ ಎಲ್ಲೆಡೆ ಮೆಚ್ಚುಗೆ ಸಿಗುತ್ತಿದೆ. ಸಂಗೀತ ನಿರ್ದೇಶಕ ಎಸ್. ಪ್ರದೀಪ್ ವರ್ಮ ಅವರು ಸಂಗೀತ ಸಂಯೋಜಿಸಿರುವ ‘ಹೇ ಹೇಳು ದೇಶ ಪ್ರೇಮಿಯೇ ವಂದೇ ಮಾತರಂ ನಮ್ಮ ಕೂಗು..’ ಎಂಬ ದೇಶದ ಹೆಮ್ಮೆ ಎನಿಸುವ ಹಾಡು ಇದೀಗ ಬಿಡುಗಡೆಗೊಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿರುವುದಲ್ಲದೆ, ಈ ವಿಡಿಯೊ ಹಾಡಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ‌ ಶ್ರೀಮುರಳಿ, ಅನಿರುದ್ಧ, ನಟಿಯರಾದ ಪಾರುಲ್ ಯಾದವ್, ನೀತುಶೆಟ್ಟಿ , ಅದ್ವಿತಿ ಶೆಟ್ಟಿ, ಸಂಗೀತ ನಿರ್ದೇಶಕ ವಿ.ಮನೋಹರ್, ನಿರ್ದೇಶಕ ನಾಗೇಂದ್ರ ಅರಸ್, ನಟ ಯತಿರಾಜ್ ಸೇರಿದಂತೆ ಇತರೆ ಸಿನಿಮಾ ತಾರೆಯರು ಕಾಣಿಸಿಕೊಂಡು ದೇಶಾಭಿಮಾನ ತೋರಿದ್ದಾರೆ.

ವಿಜಯ್ ಭರಮಸಾಗರ ಅವರ ಸಾಹಿತ್ಯ ಇರುವ ಈ ಹಾಡು ಇದಾಗಿದ್ದು, ನಮ್ಮ‌ದೇಶದ ಯೋಧರಿಗೆ ಹಾಗೂ ರೈತರಿಗೆ ಹಾಡನ್ನು ಅರ್ಪಿಸಲಾಗಿದೆ.
ಸಂಗೀತ ನಿರ್ದೇಶಕ ಎಸ್ .ಪ್ರದೀಪ್ ವರ್ಮ ಅವರ ನಿರ್ದೇಶನ ಈ ಹಾಡಿಗಿದೆ.
ಈ ಹಾಡಿಗೆ ಆರ್.ಜೆ.

ರ್ಯಾಪಿಡ್ ರಶ್ಮಿ, ಸಂತೋಷ್‌ ವೆಂಕಿ, ಇಂದು‌ ನಾಗರಾಜ್, ವೇದಶ್ರೀ , ಸುಗುಣ ಮೂರ್ತಿ ಪ್ರದೀಪ್ ವರ್ಮ ಇತರರು ಧ್ವನಿಯಾಗಿದ್ದಾರೆ. ನಾಲ್ಕು ನಿಮಿಷದ ಈ ಹಾಡು‌ ಸ್ವಾತಂತ್ರ್ಯ ‌ದಿನಾಚರಣೆಗಾಗಿಯೆ ಸಿದ್ಧಗೊಳಿಸಲಾಗಿದ್ದು, ನಾಡಿನ‌ ಹೆಮ್ಮೆಯ ಯೋಧ, ರೈತರಿಗೆ
ಸಮರ್ಪಿಸಲಾಗಿದೆ.

ದೇಶಾಭಿಮಾನಕ್ಕೆ ಮಾಡಿರುವ ಈ ವಿಡಿಯೊ ಆಲ್ಬಂ ಗೆ ಚಿತ್ರರಂಗದ ಅನೇಕರು ಪ್ರೋತ್ಸಾಹಿಸಿದ್ದಾರೆ. ಕಿರಣ್ ಛಾಯಾಗ್ರಹಣ ಹಾಗೂ ಸಂಕಲನವಿದೆ. ಎಸ್ ಪಿ ವಿ ಸ್ಟುಡಿಯೋ ಮೂಲಕ ಹಾಡು ತಯಾರಾಗಿದೆ. ಜಗದೀಶ್ ವೆಂಕಿ‌ ಅವರು ಆಲ್ಬಂ ಕ್ರಿಯೇಟಿವ್ ಹೆಡ್ ಆಗಿ‌ ಕಾರ್ಯ ನಿರ್ವಹಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!