ಈ ವಾರ ತೆರೆಗೆ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’

ಕ್ರಿಸ್ಟಲ್ ಪಾರ್ಕ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸಿರುವ `ಗುಬ್ಬಿ ಮೇಲೆ ಬ್ರಹ್ಮಾಸ್ತ್ರ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
`ಚಮಕ್`, ‘ಬೀರಬಲ್`, ‘ಅಯೋಗ್ಯ` ಮುಂತಾದ ಚಿತ್ರಗಳ ನಿರ್ಮಾಪಕರಾದ ಟಿ.ಆರ್. ಚಂದ್ರಶೇಖರ್ ಅವರು ನಿರ್ಮಿಸಿರುವ ಚಿತ್ರ `ಗುಬ್ಬಿ ಮೇಲೆ ಬ್ರಹ್ಮಾಸ್ತ್ರ`. ಈ ಚಿತ್ರವನ್ನು ಸುಜಯ್ ಶಾಸ್ತ್ರಿ ನಿರ್ದೇಶಿಸಿದ್ದಾರೆ. ಪ್ರದೀಪ್ ಬಿ.ವಿ ಹಾಗೂ ಸುಜಯ್ ಚಿತ್ರಕ್ಕೆ ಕಥೆ ಬರೆದೆರೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ವಿ.ಎಂ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುನಿತ್ ಹಲಗೇರಿ ಛಾಯಾಗ್ರಹಣ ಹಾಗೂ ಎಸ್. ಶ್ರೀಕಾಂತ್ ಶ್ರಾ¥sóï ಅವರ ಸಂಕಲನ ಈ ಚಿತ್ರಕ್ಕಿದೆ.
`ಒಂದು ಮೊಟ್ಟೆಯ ಕಥೆ` ಖ್ಯಾತಿಯ ರಾಜ್ ಶೆಟ್ಟಿ ಈ ಚಿತ್ರದ ನಾಯಕ. ಕವಿತಾ ಗೌಡ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಮೂಲತಃ ರಂಗಭೂಮಿ ಕಲಾವಿದರು ಹಾಗೂ ಈ ಚಿತ್ರದ ನಿರ್ದೇಶಕರು ಆಗಿರುವ ಸುಜಯ್ ಶಾಸ್ತ್ರಿ ಅಭಿನಯಿಸಿದ್ದಾರೆ. ಶೋಭ್‍ರಾಜ್, ಮಂಜುನಾಥ್ ಹೆಗಡೆ, ಬಾಬು ಹಿರಣ್ಣಯ್ಯ, ಅರುಣ ಬಾಲರಾಜ್, ಪ್ರಮೋದ್ ಶೆಟ್ಟಿ, ಗಿರೀಶ್, ಶಿವಣ್ಣ ಸೇರಿದಂತೆ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

This Article Has 1 Comment
  1. Pingback: fish spatula yourfishguide.com

Leave a Reply

Your email address will not be published. Required fields are marked *

Translate »
error: Content is protected !!