‘ಫಸ್ಟ್​ ನೈಟ್​ ವಿತ್​ ದೆವ್ವದ ಕಥೆ’ ಗೆ ಮುಹೂರ್ತ

ಬಿಗ್​ ಬಾಸ್​ ಖ್ಯಾತಿಯ ಪ್ರಥಮ್ ‘ನಟ ಭಯಂಕರ’ ಚಿತ್ರದ ಬಳಿಕ ‘ಫಸ್ಟ್​ ನೈಟ್​ ವಿತ್​ ದೆವ್ವದ ಕಥೆ’ ಹೇಳೋದಕ್ಕೆ ಸಜ್ಜಾಗಿದ್ದಾರೆ.

ಪಿ.ವಿ.ಆರ್​ ಸ್ವಾಮಿ ಗೂಗಾರದೊಡ್ಡಿ ನಿರ್ದೇಶನದ ‘ಫಸ್ಟ್​ ನೈಟ್​ ವಿತ್​ ದೆವ್ವದ ಕಥೆ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಹಿರಿಯ ನಟ ಶ್ರೀನಿವಾಸ ಮೂರ್ತಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

“ಫಸ್ಟ್​ ನೈಟ್​ ವಿತ್​ ದೆವ್ವದ ಕಥೆ’ ಹಾರರ್​ ವಿತ್​ ಕಾಮಿಡಿ ಜಾನರ್​ನ ಚಿತ್ರ. ಈ ಸಿನಿಮಾಗೆ ನಾನೇ ಕಥೆ ಬರೆದಿದ್ದೇನೆ. ನನಗೆ ಕಥೆ ಬರೆಯಲು ‘ವಿಕ್ರಮ್​ ಮತ್ತು ಬೇತಾಳ’ ಸ್ಟೋರಿ ಸ್ಫೂರ್ತಿ. ಈಗಾಗಲೇ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆ. ಆದರೆ ನಾವು ಸ್ವಲ್ಪ ವಿಭಿನ್ನವಾಗಿ ತೋರಿಸುತ್ತಿದ್ದೇವೆ. ನಿಖಿತ ಅವರು ನನ್ನ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ಶ್ರೀನಿವಾಸ ಮೂರ್ತಿ, ಸಂಗೀತಾ, ಹರೀಶ್​ ರಾಜ್​, ತನುಜಾ ಮುಂತಾದವರು ತಾರಾ ಬಳಗದಲ್ಲಿದ್ದಾರೆ. ಮಾನ್ಯ ಸಿಂಗ್​ ದೆವ್ವದ ಪಾತ್ರ ಮಾಡುತ್ತಿದ್ದಾರೆ​” ಎಂದು ಪ್ರಥಮ್ ತಿಳಿಸಿದರು.

ನಿರ್ದೇಶಕ ಪಿ.ವಿ.ಆರ್.ಸ್ವಾಮಿ,  “ಪ್ರಥಮ್​ ಬರೆದಿರುವ ಕಥೆ ಚೆನ್ನಾಗಿದೆ. ನಾನು ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದೇನೆ. ಇಂದಿನಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದೆ. ಹಾಡಿನ ಶೂಟಿಂಗ್​ ಹೊರ ದೇಶದಲ್ಲಿ ನಡೆಯಲಿದೆ” ಎಂದರು.

ಚಿತ್ರದಲ್ಲಿ ಪ್ರಥಮ್​ಗೆ ಜೋಡಿಯಾಗಿ ನಿಖಿತ ಹಾಗೂ ಮಾನ್ಯ ಸಿಂಗ್​ ನಟಿಸಲಿದ್ದಾರೆ.  ಶ್ರೀನಿವಾಸ ಮೂರ್ತಿ, ಸಂಗೀತ, ಹರೀಶ್​ ರಾಜ್​, ತನುಜಾ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ಇದ್ದಾರೆ.

ಕಥೆ, ಚಿತ್ರಕಥೆಯನ್ನು ಪ್ರಥಮ್​ ಬರೆದಿದ್ದಾರೆ. ಅದ್ವಿಕ್​ ವರ್ಮ ಸಂಗೀತ ನಿರ್ದೇಶನದ ಜೊತೆಗೆ ಸಂಭಾಷಣೆ ಬರೆಯುತ್ತಿದ್ದಾರೆ. ನಾಗೇಶ ಸಂಕಲನ,  ನವೀನ್​ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!