Dwarakish: ಸಾವಿನ ಸುದ್ದಿ ಬೆನ್ನಲ್ಲೇ ನಾನು ಗಟ್ಟಿಮುಟ್ಟಾಗಿದ್ದೀನಿ ಎಂದ ದ್ವಾರಕೀಶ್

ಹಿರಿಯ ನಟ ದ್ವಾರಕೀಶ್ ನಿಧನ ಎನ್ನುವ ಸುದ್ದಿ ವೈರಲ್‌ ಆದ ಬೆನ್ನಿಗೇ ಈ ಬಗ್ಗೆ ಸ್ವತಃ ದ್ವಾರಕೀಶ್ ಅವರೇ ಪ್ರತಿಕ್ರಿಯೆ ನೀಡಿ ಗಾಳಿಸುದ್ದಿಗೆ ಬ್ರೇಕ್ ಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕನ್ನಡದ ಹೆಸರಾಂತ ಹಿರಿಯ ನಟ ದ್ವಾರಕೀಶ್ ನಿಧನ ಎಂಬ ಸುದ್ದಿ ಓದಿ ಸಾಕಷ್ಟು ಮಂದಿ ದ್ವಾರಕೀಶ್ ಅವರಿಗೆ ಕರೆ ಮಾಡಿದ್ದರು. ಈ ಕಾರಣದಿಂದ ದ್ವಾರಕೀಶ್ ವಿಡಿಯೋ ಮೂಲಕ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿ ದ್ವಾರಕೀಶ್ ಅವರು, ನಮಸ್ಕಾರ.ನಾನು ದ್ವಾರಕೀಶ್, ನೀವು ಸಾಕಿ, ಬೆಳೆಸಿದ ದ್ವಾರಕೀಶ್, ಚೆನ್ನಾಗಿದ್ದೀನಿ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು. ಗಟ್ಟಿಮುಟ್ಟಾಗಿದ್ದೀನಿ. ಯಾವುದೇ ಚಿಂತೆ ಇಲ್ಲ. ನಗ್ತಾ ಇದ್ದೀನಿ. ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ಇರಲಿ. ನಿಮ್ಮೆಲ್ಲರ ಆಶೀರ್ವಾದ ಇರೋವರೆಗೂ ನನಗೆ ಏನು ಆಗಲ್ಲ’ ಎಂದಿದ್ದಾರೆ.

ಈ ವಿಡಿಯೋ ಮೂಲಕ ದ್ವಾರಕೀಶ್ ಅವರ ಸಾವಿನ ಕುರಿತಾಗಿ ಹಬ್ಬುತ್ತಿದ್ದ ಸುಳ್ಳು ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

ದ್ವಾರಕೀಶ್ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!