Duniya Vijay ದುನಿಯಾ ಜೊತೆ ಜಡೇಶ್ ಸಿನಿಮಾ ಘೋಷಣೆ

ನಿರ್ದೇಶಕ ಜಡೇಶ್ ಹಂಪಿ ಜೊತೆ ದುನಿಯಾ ವಿಜಯ್ ಸಿನಿಮಾ ಘೋಷಣೆ ಮಾಡಿದ್ದಾರೆ.

ಜಡೇಶ್ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ‘ಗುರು ಶಿಷ್ಯರು’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಈಗ ದುನಿಯಾ ವಿಜಯ್ ಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.

‘ವಿಕೆ 29’ನ್ನು ದೊಡ್ಡ ಸಿನಿಮಾವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಕಥೆ ಕೂಡ ಯೂನಿವರ್ಸಲ್ ಆಗಿ ಕನೆಕ್ಟ್ ಆಗುವಂತದ್ದು ಆಗಿದೆ ಎಂದು ಜಡೇಶ್ ಕುಮಾರ್ ಹೇಳಿದ್ದಾರೆ.

ವಿಜಯ್ ಅವರಿಗೆ ಬರೆದಿರುವ ಕಥೆ ದೊಡ್ಡ ಕ್ಯಾನ್ವಾಸ್ನಲ್ಲಿ ನಿರ್ಮಾಣವಾಗಲಿರುವ ಚಿತ್ರ. ನಾನು ಬರೆದಿರುವ ಕಥೆ ಸ್ವಾತಂತ್ರ್ಯದ ನಂತರ ನಡೆಯುತ್ತದೆ. ಕೆಲವು ನೈಜ ಘಟನೆಗಳನ್ನು ಆಧರಿಸಿ ಈ ಕಥೆ ಬರೆದಿದ್ದೇನೆ. ಕಂಪ್ಲೀಟ್ ಆಕ್ಷನ್ ಇರುತ್ತದೆ. ವಿಜಯ್ ಅವರ ಕರಿಯರ್ ಮತ್ತು ನನ್ನ ಕರಿಯರ್ ನಲ್ಲಿ ಇದೊಂದು ರೀತಿಯ ವಿಭಿನ್ನ ಆಲೋಚನೆ ಮತ್ತು ಪ್ರಯತ್ನ ಎಂದು ಅವರು ಹೇಳಿದ್ದಾರೆ.

ವಿಜಯ್ ಅವರು ಸದ್ಯ ‘ಭೀಮ’ ಸಿನಿಮಾದ ಕೆಲಸದಲ್ಲಿದ್ದು, ಏಪ್ರಿಲ್ ಅಷ್ಟೊತ್ತಿಗೆ ಅದನ್ನು ಮುಗಿಸುತ್ತಾರೆ. ಬಳಿಕ ನಮ್ಮ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ.

‘ಭೀಮ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಜಗದೀಶ್ ಮತ್ತು ಕೃಷ್ಣ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ತಂತ್ರಜ್ಞರ ಆಯ್ಕೆಯಾಗಬೇಕಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!