Duniya Vijay ದುನಿಯಾ ವಿಜಯ್ ಪಾತ್ರದ ಬಗ್ಗೆ ಅಸಮಾಧಾನ

ನಂದಮುರಿ ಬಾಲಕೃಷ್ಣ ಅವರ ‘ವೀರಸಿಂಹರೆಡ್ಡಿ’ ಸಿನಿಮಾ ನೋಡಿರುವ ದುನಿಯಾ ವಿಜಯ್ ಅಭಿಮಾನಿಗಳು ಈ ರೀತಿಯ ಪಾತ್ರಗಳಿಗೆ ಒಪ್ಪಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

‘ವೀರಸಿಂಹರೆಡ್ಡಿ’ ಚಿತ್ರದ ವಿಜಯ್‌ ಪೋಸ್ಟರ್‌ವೊಂದು ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ನಾಯಕ, ವಿಲನ್‌ ತಲೆಯನ್ನು ಕತ್ತಿಯಿಂದ ಕತ್ತರಿಸುವ ದೃಶ್ಯವಿದು. ಈ ಫೋಟೋ ನೋಡಿದವರು ವಿಜಯ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

”ನಮ್ಮ ಕನ್ನಡ ಹೀರೋಗಳು ಕರ್ನಾಟಕದಲ್ಲಿ ರಾಜರ ರೀತಿ ಇರ್ತಾರೆ. ಆದರೆ ಪರಭಾಷೆಯ ಸಿನಿಮಾ ಮಾಡಲು ಹೋಗಿ ಅವರ ಬಳಿ ಒದೆ ತಿಂತಾರೆ” ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ನಮ್ಮ ಹೀರೋಗಳನ್ನು ಅಲ್ಲಿ ಈ ಮಟ್ಟಕ್ಕೆ ತೋರಿಸಿರುವುದು ನಮಗೆ ಸರಿ ಕಾಣಲಿಲ್ಲ. ಟ್ರೇಲರ್‌ನಲ್ಲಿ ಕೂಡಾ ವಿಜಯ್‌, ಒಂದೆರಡು ಶಾಟ್‌ಗಳಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ. ಜೊತೆಗೆ ಚಿತ್ರದ ಯಾವ ಪೋಸ್ಟರ್‌ಗಳಲ್ಲಿ ಕೂಡಾ ಅವರ ಹೆಸರು ಇಲ್ಲ. ಇದು ನಮಗೆಲ್ಲಾ ಅವಮಾನ ಮಾಡಿದಂತೆ. ದಯವಿಟ್ಟು ಇನ್ಮುಂದೆ ಪರಭಾಷೆ ಸಿನಿಮಾಗಳನ್ನು ಒಪ್ಪಿಕೊಳ್ಳುವಾಗ ನೂರು ಬಾರಿ ಯೋಚಿಸಿ, ಯಾವುದೇ ಕಾರಣಕ್ಕೂ ಅಭಿಮಾನಿಗಳಿಗೆ ನಿರಾಸೆ ಮಾಡಬೇಡಿ ಎಂದು ಫ್ಯಾನ್ಸ್‌ ಮನವಿ ಮಾಡುತ್ತಿದ್ದಾರೆ.

ಈಗ ವಿಜಯ್‌ ‘ಭೀಮ’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದನ್ನು ವಿಜಯ್‌ ಅವರೇ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಜಗದೀಶ್ ಮತ್ತು ಕೃಷ್ಣ ಸಾರ್ಥಕ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!