ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಗೆ ಕೋರ್ಟ್ ಗೆ ಬರೋದಿಕ್ಕೆ ಬೆನ್ನು ನೋವು. ಆದರೆ ಮೂರು ಗಂಟೆ ಕೂತು ಸಿನಿಮಾ ನೋಡೋದಿಕ್ಕೆ ಬೆನ್ನು ನೋವು ಇರೋಲ್ವಾ? ಎಂದು ನೆಟ್ಟಿಗರು ಕೇಳುತ್ತಿದ್ದಾರೆ.
ದರ್ಶನ್ ನಿನ್ನೆ ವಿಚಾರಣೆಗೆ ಗೈರಾಗಿದ್ದು ಈ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆ ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಿದೆ. ಬೆನ್ನು ನೋವಿನ ಕಾರಣ ಹೇಳಿ ದರ್ಶನ್ ವಿಚಾರಣೆಗೆ ಗೈರಾಗಿದ್ದರು. ಈ ನಡುವೆ ಇಂದು ದರ್ಶನ್, ಧನ್ವೀರ್ ನಟನೆಯ ವಾಮನ ಸಿನಿಮಾ ವೀಕ್ಷಣೆಗೆ ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಧನ್ವೀರ್ ನಟನೆಯ ‘ವಾಮನ’ ಸಿನಿಮಾ ನಾಳೆ ತೆರೆಗೆ ಬರ್ತಿದೆ. ಇಂದು ವಾಮನ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಂಜೆ 6.30ಕ್ಕೆ ವಾಮನ ಸಿನಿಮಾವನ್ನು ದರ್ಶನ್ ನೋಡಲಿದ್ದಾರೆ. ದರ್ಶನ್ ಒಡೆತನದ ತೂಗುದೀಪ ಡೈನೆಸ್ಟಿ ಈ ಮಾಹಿತಿ ಹಂಚಿಕೊಂಡಿದೆ.
ವಾಮನ ಸಿನಿಮಾದ ಟ್ರೇಲರ್ ಇವೆಂಟ್ ಕಳೆದ ತಿಂಗಳ 27ರಂದು ಬೆಂಗಳೂರಿನ ಪ್ರಸನ್ನ ಥಿಯೇಟರ್ ನಲ್ಲಿ ಏರ್ಪಡಿಸಲಾಗಿತ್ತು. ಈ ಅದ್ಧೂರಿ ಇವೆಂಟ್ ಗೆ ದರ್ಶನ್ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್ ರಾಜಸ್ಥಾನದಲ್ಲಿ ಡೆವಿಲ್ ಶೂಟಿಂಗ್ ನಲ್ಲಿ ಭಾಗಿಯಾದ ಕಾರಣ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ.
ವಾಮನ ಸಿನಿಮಾದ ಹಾಡನ್ನು ವಿಜಯಲಕ್ಷ್ಮೀ ದರ್ಶನ್ ರಿಲೀಸ್ ಮಾಡಿದ್ದರು. ಇಂದು ವಾಮನ ಪ್ರೀಮಿಯರ್ ಶೋಗೆ ವಿಜಯಲಕ್ಷ್ಮೀ ಆಗಮಿಸುವ ಸಾಧ್ಯತೆ ಹೆಚ್ಚಿದೆ.
—-

Be the first to comment