ಮಾಧ್ಯಮಗಳಿಗೆ ಮಧ್ಯದ ಬೆರಳು ತೋರಿಸಿದ ದರ್ಶನ್!

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಮಾಧ್ಯಮಗಳನ್ನು ನೋಡಿ  ಅಸಭ್ಯ ಸನ್ನೆ ಮಾಡಿರೋದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ -ವಿರೋಧದ ಚರ್ಚೆ ಶುರುವಾಗಿದೆ.‌

ವಕೀಲರ ಜೊತೆ ವಿಜಯಲಕ್ಷ್ಮಿ ಕುಟುಂಬ ಬಳ್ಳಾರಿ ಜೈಲಿಗೆ ಭೇಟಿ ನೀಡಿತ್ತು. ಆಗ ವಕೀಲರ ಜೊತೆ ಕಾನೂನು  ಬಗ್ಗೆ ಚರ್ಚಿಸಿ ಹೋಗುವಾಗ ಮಾಧ್ಯಮಕ್ಕೆ ದರ್ಶನ್ ಅಸಭ್ಯ ಕೈ ಸನ್ನೆ ಮಾಡಿದ್ದಾರೆ ಎನ್ನಲಾಗಿದೆ.

ದರ್ಶನ್  ಇನ್ನೇನು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಆದರೆ ಜೈಲಿನಲ್ಲಿ ಅವರ ವರ್ತನೆ ಈಗ  ಮುಳುವಾಗಲಿದೆಯಾ ಎಂಬ ಅನುಮಾನ ಶುರುವಾಗಿದೆ.

ಜೂನ್ 11 ರಂದು ಬಂಧಿತರಾಗಿದ್ದ ದರ್ಶನ್  ಎರಡು ವಾರ ಪೊಲೀಸ್ ಕಸ್ಟಡಿ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎರಡು ತಿಂಗಳು ನ್ಯಾಯಾಂಗ ಬಂಧನ ಅನುಭವಿಸಿದ್ದರು.  ಈ ವೇಳೆ ಅವರು ಜೈಲಿನಲ್ಲಿ  ರಾಜಾತಿಥ್ಯ ಪಡೆದುಕೊಂಡು ರೆಸಾರ್ಟ್ ನಲ್ಲಿದ್ದಂತೆ ಕಾಲ ಕಳೆದ ಫೋಟೋಗಳು ವೈರಲ್ ಆಗುತ್ತಿದ್ದಂತೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು.

ದರ್ಶನ್ ಬಳ್ಳಾರಿ ಜೈಲಿನಲ್ಲಿ ನಿನ್ನೆ ತಮ್ಮ ಕಡೆಗೆ ಫೋಕಸ್ ಮಾಡಿದ್ದ ಮಾಧ್ಯಮಗಳ ಕ್ಯಾಮರಾದತ್ತ ಮಧ್ಯ ಬೆರಳು ತೋರಿ ಅಸಭ್ಯ ವರ್ತನೆ ತೋರುವ ಮೂಲಕ ಇಂಥಾ ಪ್ರಕರಣದಲ್ಲಿ ಸಿಲುಕಿ ಜೈಲು ವಾಸ ಅನುಭವಿಸಿದರೂ ತಮ್ಮ ದುರಹಂಕಾರ ಕಡಿಮೆಯಾಗಲಿಲ್ಲ ಎಂದು ತೋರಿಸಿದ್ದಾರೆ. ಅವರ ಈ ವರ್ತನೆಗಳು ಸಹಜವಾಗಿಯೇ ಜಾಮೀನು ಅರ್ಜಿ ವಿಚಾರಣೆ ವೇಳೆ ಉಲ್ಲೇಖವಾಗಲಿದೆ. ಇಂಥ ವ್ಯಕ್ತಿಯನ್ನು ಹೊರಗೆ ಬಿಟ್ಟರೆ ಕೇಸ್ ನ ಮೇಲೆ ಯಾವ ರೀತಿಯ ಪರಿಣಾಮವಾಗಬಹುದು ಎಂದು ಎಸ್ ಪಿಪಿ  ವಾದ ಮಂಡಿಸಲಿದ್ದಾರೆ ಎನ್ನಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!