ಕಿರುತೆರೆಯಲ್ಲಿ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ

ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನು ಆಧರಿಸಿದ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ಸೆಪ್ಟೆಂಬರ್ 17ರಂದು ಸಂಜೆ 6ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿದೆ.

ಇತ್ತೀಚೆಗೆ ತೆರೆಕಂಡ ‘ಡೇರ್ ಡೆವಿಲ್ ಮುಸ್ತಫಾ’ ಬೆಳ್ಳಿತೆರೆಯಲ್ಲಿ ಸದ್ದು ಮಾಡಿತ್ತು. ಪೂಚಂತೆ ಅಭಿಮಾನಿಗಳೆಲ್ಲರೂ ಸೇರಿ ಈ ಚಿತ್ರ ಪ್ರೊಡ್ಯೂಸ್ ಮಾಡಿದ್ದರು.

ಪೂಚಂತೆ ಅವರ ಕಥೆಗಳಲ್ಲಿ ಬರುವ ಅಬಚೂರು ಊರಿನಲ್ಲಿರುವ ಸರ್ಕಾರಿ ಕಾಲೇಜು ಒಂದರಲ್ಲಿ ನಡೆಯುವ ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಶಶಾಂಕ್ ಸೋಹಗಲ್ ಸಿನಿಮಾ ಮಾಡಿದ್ದಾರೆ.

ಹಿಂದೂ, ಮುಸ್ಲಿಂ ವಿಚಾರವನ್ನು ಇಟ್ಟುಕೊಂಡಿರುವ ಈ ಸಿನಿಮಾ ಸೌಹಾರ್ದಯುತ ಸಹಬಾಳ್ವೆ ಹಾಗೂ ಸಮನ್ವಯದ ಜೀವನದ ಕಡೆಗೆ ಸಾಗುವ ಸಂದೇಶ ಹೊಂದಿದೆ.

“ಕಥೆ ಕಾದಂಬರಿಗಳು ಸಿನಿಮಾವಾಗಬೇಕು. ಆಗ ಮಾತ್ರ ಅದು ಹೆಚ್ಚು ಜನರಿಗೆ ತಲುಪಲು ಸಾಧ್ಯ” ಎಂದು ಪೂಚಂತೆ ಹೇಳಿದ್ದರು. ಈಗ ಅವರ ಕಥೆಯ ಸಿನಿಮಾ ಜನರನ್ನು ಥಿಯೇಟರ್‌ ಬಳಿಕ ಟೀವಿಯಲ್ಲಿ ತಲುಪಲಿದೆ.

ಸಿನಿಮಾದಲ್ಲಿ ಹೊಸ ಕಲಾವಿದರ ಜೊತೆಗೆ ಹೆಸರಾಂತ ನಟರಾದ ಮಂಡ್ಯ ರಮೇಶ್, ಮೈಸೂರು ಆನಂದ್, ನಾಗಭೂಷಣ್ ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!