ಹಾರರ್ ಚಿತ್ರ ‘ಛಾಯ’ ಟಾಕಿ ಮುಕ್ತಾಯ

ಕಳೆದ ಇಪ್ಪತ್ತೆರಡು ವರ್ಷಗಳಿಂದಲೂ ನೃತ್ಯ ಕಲಾವಿದರಾಗಿ ಹಾಗೂ ಈಗ ಸುಮಾರು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಡಿರರುವ ಜಗ್ಗು ಈಗ ಸಿನಿಮಾ ನಿರ್ದೇಶಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಆಗ ಉಪೇಂದ್ರ ಅಭಿನಚಿiÀುದ ಎ ಚಿತ್ರದಲ್ಲಿ ಕೂಡಾ ಕೆಲಸ ಮಾಡಿರುವ ಚಿತ್ರ ಛಾಯ ಎಂಬ ಚಲನಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೆ, ಕೊರಿಯೋಗ್ರಫರ್ ಆಗಿಯೂ ಕೆಲಸ ಮಾಡಿದ್ದಾರೆ. ಲವ್ ಹಾಗೂ ಸೆಂಟಿಮೆಂಟ್ ಕಥಾ ಹಚಿದರ ಹೊಂದಿರುವ ಈ ಚಿತ್ರದ ಟಾಕಿ ಭಾಗ ಈಗಾಗಲೇ ಮುಕ್ತಾಯಗೊಂಡಿದ್ದು, ಚಿತ್ರದಲ್ಲಿ ಐದು ಹಾಡುಗಳು ಮತ್ತು ನಾಲ್ಕು ಸಾಹಸ ಸನ್ನಿವೇಷಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಬೆಂಗಳೂರು, ಸಕಲೇಶಪುರ ಹಾಗೂ ಮಂಡ್ಯ ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಜನ ಸ್ನೇಹಿತರ ನಡುವೆ ನಡೆಯುವ ಕತೆ ಈ ಚಿತ್ರದಲ್ಲಿದ್ದು, ಇದರ ಜೊತೆಗೆ ಒಂದು ಹಾರರ್ ಎಲಿಮೆಂಟ್ ಕೂಡಾ ಇದೆ. ದೆವ್ವದ ರಿವೇಂಜ್ ಕಥೆಯನ್ನು ಕೂಡಾ ನಿರ್ದೇಶಕರು ಈ ಚಿತ್ರದಲ್ಲಿ ತಂದಿದ್ದಾರೆ.

ನ್ಯೂ ಗ್ಲೋಬಲ್ ಕ್ರಿಯೇಶನ್ಸ್ ಲಾಂಛನದಲ್ಲಿ ಮಧು ಗೌಡ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅರುಣ್ ಬೀರೂರು ಛಾಯಾಗ್ರಹಣ, ಮಂಜು ಕವಿ ಸಂಗೀತ, ಅಪ್ಪು ವೆಂಕಟೇಶ್, ಹ್ಯಾರಿಸ್ ಡ್ಯಾನಿ ಸಾಹಸ, ದುರ್ಗ ಪಿ.ಎಸ್. ಸಂಕಲನ, ಮಂಜುಕವಿ ಸಾಹಿತ್ಯ, ನಂದನ್, ಪ್ರವೀರ್ಣ ಚಾಲ್ರ್ಸ್, ರಂಗರಾಜು (ಬಾಬಣ್ಣ) ಸಹನಿರ್ಮಾಪಕರಾಗಿದ್ದು, ಆನಂದ್ ತೇಜು, ರಾಜಶೇಖರ್, ಅನನ್ಯಾ, ನಯನ ಕೃಷ್ಣ, ಲಕ್ಪ್ಷ್ಮಣ್, ಗೋವಿಂದಪ್ಪ, ಲಕ್ಷ್ಮಿ, ಕಿಲ್ಲರ್ ವೆಂಕಟೇಶ್, ರಾಜ್ ಉದಯ್, ರೋಹಿಣಿ, ಅಮೃತ್ ರಾಜ್ ಇನ್ನು ಮುಂತಾದವರ ತಾರಾಬಳಗವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!