d boss ಡಿ ಬಾಸ್ ಮೇಲೆ ಚಪ್ಪಲಿ ಎಸೆತ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿದ್ದಾನೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ದರ್ಶನ್‌ ಅವರು ತಮ್ಮ ಮುಂಬರುವ ಕ್ರಾಂತಿ ಸಿನಿಮಾದ ಎರಡನೇ ಹಾಡು ʼಬೊಂಬೆ ಬೊಂಬೆʼ ಬಿಡುಗಡೆ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ದರ್ಶನ್‌ ಹಾಗೂ ಪುನೀತ್‌ ರಾಜ್ ಕುಮಾರ ಅವರ ಅಭಿಮಾನಿಗಳ ನಡುವೆ ಘರ್ಷಣೆ ನಡೆದು ಕ್ರಾಂತಿ ಸಿನಿಮಾದ ಕಟೌಟ್‌ಗಳನ್ನು ಹರಿದು ಹಾಕಲಾಗಿತ್ತು.

ಈ ನಡುವೆ ದರ್ಶನ್‌ ಅವರು ಪುನೀತ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದಾಗ ಒಂದು ಹಂತಕ್ಕೆ ಎಲ್ಲವೂ ಸರಿಯಾಯ್ತು ಎನ್ನುವಷ್ಟರಲ್ಲಿ, ವೇದಿಕೆ ಮೇಲೆ ನಿಂತಿದ್ದ ದರ್ಶನ್‌ ಅವರ ಮೇಲೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದ. ಈ ವೇಳೆ ದರ್ಶನ್‌ ಅಭಿಮಾನಿಗಳು ಕೆಂಡಾಮಂಡಲವಾದರು. ದರ್ಶನ್‌ ಇದನ್ನು ನಗುತ್ತಲೇ ಸ್ವೀಕರಿಸಿ ಪರವಾಗಿಲ್ಲ ಬಿಡು ಚಿನ್ನ ಅಂತ ಸುಮ್ಮನಾದರು. ಈ ಘಟನೆ ದರ್ಶನ್ ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ಕಳೆದ ಕೆಲವು ದಿನಗಳಿಂದ ಹೊಸಪೇಟೆಯಲ್ಲಿ ದರ್ಶನ್‌ ಮತ್ತು ಪುನೀತ್‌ ಅಭಿಮಾನಿಗಳ ಮಧ್ಯ ತೆರೆಮರೆಯಲ್ಲಿ ಟಾಕ್‌ ವಾರ್‌ ನಡೆದಿತ್ತು. ಇದಕ್ಕೆ ಕಾರಣ ಅಪ್ಪು ಕುರಿತು ದಚ್ಚು ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾದ ಸುದ್ದಿ.

ಈ ಹಿಂದೆ ದರ್ಶನ್, ಸತ್ತ ಮೇಲೆ ಅಪ್ಪುವನ್ನು ಅಭಿಮಾನಿಗಳು ಮೆರೆಸ್ತಿದ್ದಾರೆ, ನನ್ನನ್ನು ಜೀವಂತವಾಗಿರುವಾಗಲೇ ಮೆರೆಸ್ತಿದ್ದಾರೆ ಎಂದಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಅಪ್ಪು ಪ್ಯಾನ್ಸ್‌ ದರ್ಶನ್‌ ಹೊಸಪೇಟೆಗೆ ಕಾಲಿಟ್ಟರೆ ಸರಿಯಾಗಿರಲ್ಲ ಎಂದು ಅವಾಜ್‌ ಹಾಕಿದ್ದರು. ಇದಕ್ಕೆ ದರ್ಶನ್‌ ಫ್ಯಾನ್ಸ್‌ ತೊಡೆತಟ್ಟಿದ್ದರು. ದರ್ಶನ್ ಈ ಹಿಂದೆ ಆಡಿದ ಮಾತು, ಚಪ್ಪಲಿ ಎಸೆತ ಘಟನೆಗೆ ಇದು ಮೂಲ ಕಾರಣ ಎಂದು ಹೇಳಲಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!