ಸಾಹಸ ಕಲಾವಿದರಿಗಾಗಿ ‘ಸಾಹಸ ನಿಲಯ’ನಿರ್ಮಾಣ

ಸಿನಿಮಾದಲ್ಲಿ ಸಾಹಸ ಸನ್ನಿವೇಶಗಳು ಚೆನ್ನಾಗಿ ಮೂಡಿ ಬರುವಲ್ಲಿ ಸಾಹಸ ನಿರ್ದೇಶಕರ ಪಾತ್ರ ಮಹತ್ವದು. ಇನ್ನು ಕನ್ನಡದ ಸಾಕಷ್ಟು ಸಾಹಸ ನಿರ್ದೇಶಕರು ಭಾರತದಾದ್ಯಂತ ಹಲವು ಸಿನಿಮಾಗಳಲ್ಲಿ‌ ಕಾರ್ಯನಿರ್ವಹಿಸಿ ಪ್ರಸಿದ್ಧರಾಗಿದ್ದಾರೆ.

ಅಖಿಲ ಕರ್ನಾಟಕ ಸಾಹಸ ಕಲಾವಿದರ ಸಂಘದ ಕಲಾವಿದರಿಗಾಗಿ ವಿಜಯ ದಶಮಿ ಶುಭ ಸಂದರ್ಭದಲ್ಲಿ ನೂತನ ಕಟ್ಟಡವಾದ ‘ಸಾಹಸ ನಿಲಯ’ದ ಉದ್ಘಾಟನೆಯಾಗಿದೆ.

ಉದ್ಘಾಟನೆಯ ವೇಳೆ ನಟ ವಿನೋದ್ ಪ್ರಭಾಕರ್, ತರುಣ್ ಸುಧೀರ್, ಹಾಗೂ ಥ್ರಿಲ್ಲರ್ ಮಂಜು, ರವಿವರ್ಮ, ಡಿಫರೆಂಟ್ ಡ್ಯಾನಿ ಸೇರಿದಂತೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ರು.

ಕಲಾವಿದರಿಗೆ ನೂತನವಾಗಿ ನಿರ್ಮಾಣವಾಗಿರುವ ಸಾಹಸ ನಿಲಯ ಕಟ್ಟಡವು‌ ನಾಯಂಡಹಳ್ಳಿಯ ಐ ಟಿ ಐ ಲೇಔಟ್​​ನಲ್ಲಿ ತಲೆಯೆತ್ತಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!