Brinda acharya: ಮಹಿಳಾ ಪ್ರಧಾನ ಸಿನಿಮಾಗೆ ಬೃಂದಾ ಆಚಾರ್ಯ ನಾಯಕಿ

ಪ್ರೇಮಂ ಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ಅವರು ಮಹಿಳಾ ಪ್ರಧಾನ ಸಿನಿಮಾಗೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.

ರೀತು ಹೆಸರಿನ ಈ ಚಿತ್ರಕ್ಕೆ ಡಾ. ಗೌರಿಶ್ರೀ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಜನರಕ್ಷಕ, ಅಮೂಲ್ಯ ಬಳಿಕ ಗೌರಿ ಶ್ರೀ ಅವರ ಮೂರನೇ ಚಿತ್ರ ಇದಾಗಿದೆ. ಚಿತ್ರ ಸೆಟ್ಟೇರಿದ್ದು, ಬೃಂದಾ ಅವರು ರೀತು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಆರ್ಯನ್, ಸುರೇಂದ್ರ, ಶೋಭರಾಜ್, ನಾಗೇಂದ್ರ ಅರಸ್, ಲಯ ಕೋಕಿಲಾ, ಆರಾಧ್ಯ ಮತ್ತು ತೇಜಸ್ವಿನಿ ನಟಿಸಿದ್ದಾರೆ.

‘ರೀತು ಅಂದರೆ ಋತುಗಳು, ಇದು ಮಂಡ್ಯದ ನೈಜ ಕಥೆಯನ್ನು ಆಧರಿಸಿದೆ. ನಾನು ಬಬ್ಲಿ, ಸ್ವಾವಲಂಬಿ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದೇನೆ’ ಎಂದು ಬೃಂದಾ ಹೇಳಿದ್ದಾರೆ.

ಚಿತ್ರಕ್ಕೆ ಹೇಮಂತ್ ಸಂಗೀತ, ಸಂದೀಪ್ ಹೊನ್ನಾಳಿ ಛಾಯಾಗ್ರಹಣ ಇರಲಿದೆ.

ಬೃಂದಾ ಅವರು ಶಶಾಂಕ್ ಅವರ ಚಿತ್ರ ಕೌಸಲ್ಯ ಸುಪ್ರಜಾ ರಾಮ ಮತ್ತು ಇನ್ನೊಂದು ಕನ್ನಡ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇವರು ವಿಎಫ್ಎಕ್ಸ್-ಹೆವಿ ಚಿತ್ರದೊಂದಿಗೆ ತಮಿಳಿಗೂ ಪದಾರ್ಪಣೆ ಮಾಡಲಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!